back to top
24.9 C
Bengaluru
Thursday, July 24, 2025
HomeNewsಪ್ರಾಣ ಪಣಕ್ಕಿಟ್ಟು ಕರ್ತವ್ಯ ಪಾಲನೆ-Railway Loco Pilot

ಪ್ರಾಣ ಪಣಕ್ಕಿಟ್ಟು ಕರ್ತವ್ಯ ಪಾಲನೆ-Railway Loco Pilot

- Advertisement -
- Advertisement -

ಪ್ರಾಣದ ಹಂಗು ತೊರೆದು ಕರ್ತವ್ಯ ಪಾಲನೆ ಮಾಡುವ ಹಲವರಿದ್ದಾರೆ. ಕೆಲ ದಿನಗಳ ಹಿಂದೆ ಲೈನ್ಮ್ಯಾನ್ ಒಬ್ಬರು ಈಜಿಗೊಂಡು ಹೊಳೆ ದಾಟಿ ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸಿದ ಸುದ್ದಿಯೊಂದು ಸಖತ್ ವೈರಲ್ ಆಗಿತ್ತು. ಇದೀಗ ಇಲ್ಲೊಬ್ರು ಸಹಾಯಕ Loco Pilot ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೈಲ್ವೆ (Railway) ಸೇತುವೆಯ ಮೇಲೆ ನಿಂತಿದ್ದ ರೈಲಿನಡಿ ಹೋಗಿ ಏರ್ ಲೀಕೇಜ್ (air leakage) ಸಮಸ್ಯೆಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಲೋಕೋ ಪೈಲಟ್ಗಳು (Loco Pilot) ತಮ್ಮ ಕರ್ತವ್ಯದ ಜೊತೆಗೆ ಸಾಹಸ, ಹೃದಯವಂತಿಕೆಯ ಕಾರಣದಿಂದಲೂ ಆಗಾಗ್ಗೆ ಗಮನ ಸೆಳೆಯುತ್ತಿರುತ್ತಾರೆ. ಈ ಹಿಂದೆ ಲೋಕೋ ಪೈಲಟ್ ಒಬ್ಬರು ಸೇತುವೆಯಲ್ಲಿ ನಿಂತಿದ್ದ ರೈಲಿನಡಿ ತೆವಳುತ್ತಾ ಹೋಗಿ ದುರಸ್ತಿ ಕಾರ್ಯ ಮಾಡಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಸಹಾಯಕ ಲೋಕೋ ಪೈಲಟ್ ಒಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೈಲ್ವೆ ಸೇತುವೆಯ ಮೇಲೆ ನಿಂತಿದ್ದ ರೈಲಿನಡಿ ಹೋಗಿ ರೈಲಿನ ಏರ್ ಲೀಕೇಜ್ (air leakage) ಸಮಸ್ಯೆಯನ್ನು ಸರಿಪಡಿಸಿ, ಸುಗಮ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ಘಟನೆ ಸೆಪ್ಟೆಂಬರ್ 26 ರಂದು ನಡೆದಿದ್ದು, ಸಹಾಯಕ ಲೋಕೋ ಪೈಲಟ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೈಲ್ವೆ ಸೇತುವೆಯ ಮೇಲೆ ನಿಂತಿದ್ದ ರೈಲಿನಡಿ ಹೋಗಿ ಏರ್ ಲೀಕೇಜ್ ಸಮಸ್ಯೆಯನ್ನು ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬ್ರಹ್ಮಪುತ್ರ ಮೇಲ್ (1567) ರೈಲು ದೆಹಲಿಯಿಂದ ಕಾಮಖ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಸ್ಸಾಂನ ರಂಗಿಯಾ ಜಂಕ್ಷನ್ ಬಳಿಯ ಬಿಜ್ನಿ ರೈಲು ನಿಲ್ದಾಣ ಮತ್ತು ಪಾಟೀಲದಾಹ ನಡುವಿನ ಸೇತುವೆ ಸಂಖ್ಯೆ 456 ರಲ್ಲಿ ಏರ್ ಲೀಕೇಜ್ ಸಮಸ್ಯೆಯಿಂದ ಆ ರೈಲು ನಿಂತಿತು. ಈ ಸಮಸ್ಯೆಯನ್ನು ಸರಿಪಡಿಸಲು ಸಹಾಯಕ ಲೋಕೋ ಪೈಲಟ್ ರಾಮ್ಜಿ ಕುಮಾರ್ ಎಂಬವರು ಜೀವದ ಹಂಗು ತೊರೆದು ಸೇತುವೆಯ ಕಿರಿದಾದ ಜಾಗದಲ್ಲಿ ಹೋಗಿ ಸಮಸ್ಯೆಯನ್ನು ಸರಿಪಡಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page