Uttarakhand: ಬದರಿನಾಥ ಮತ್ತು ಅದರ ಸುತ್ತಮುತ್ತ ಭಾರೀ ಹಿಮಪಾತ (Avalanche) ಸಂಭವಿಸಿ, 47 ಮಂದಿ ಇನ್ನೂ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ.
ಮಾನಾ ಗ್ರಾಮದ ಬಳಿ ಹಿಮಪಾತ ಸಂಭವಿಸಿ, 47 ಕಾರ್ಮಿಕರು ಹಿಮದಡಿ ಸಿಕ್ಕಿಹಾಕಿಕೊಂಡಿದ್ದಾರೆ. ಒಟ್ಟು 57 ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ.
10 ಕಾರ್ಮಿಕರನ್ನು ಗಂಭೀರ ಸ್ಥಿತಿಯಲ್ಲಿ ಸೇನಾ ಶಿಬಿರಕ್ಕೆ ಕಳುಹಿಸಲಾಗಿದೆ. BRO ತಂಡ, ಐಟಿಬಿಪಿ, ಗರ್ವಾಲ್ ಸ್ಕೌಟ್ ಗಳು ಮತ್ತು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ತ್ವರಿತ ರಕ್ಷಣಾ ಕಾರ್ಯಾಚರಣೆಗೆ ಸೂಚನೆ ನೀಡಿದ್ದು, ಹೆಚ್ಚಿನ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸಲಾಗಿದೆ. ಹವಾಮಾನ ಭೀಕರವಾಗಿರುವ ಕಾರಣ ಪರಿಸ್ಥಿತಿ ಗಂಭೀರವಾಗಿದೆ.