back to top
28.3 C
Bengaluru
Friday, June 20, 2025
HomeKarnatakaದುಷ್ಕರ್ಮಿಗಳ ಗುಂಡಿನ ದಾಳೆಯಲ್ಲಿ Ricky Rai ಗಂಭೀರವಾಗಿ ಗಾಯ: ಕುತಂತ್ರದ ಶಂಕೆ

ದುಷ್ಕರ್ಮಿಗಳ ಗುಂಡಿನ ದಾಳೆಯಲ್ಲಿ Ricky Rai ಗಂಭೀರವಾಗಿ ಗಾಯ: ಕುತಂತ್ರದ ಶಂಕೆ

- Advertisement -
- Advertisement -

Ramanagaram: ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ (Ricky Rai) ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ರಾಮನಗರದ ಬಿಡದಿ ಬಳಿ ನಡೆದಿದೆ. ರಾತ್ರಿ 11:30ರ ಸುಮಾರಿಗೆ ಈ ದಾಳಿ ನಡೆದಿದೆ.

ರಿಕ್ಕಿ ರೈ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಸಾಮಾನ್ಯವಾಗಿ ತಾವೇ ಕಾರು ಓಡಿಸುತ್ತಿದ್ದ ಅವರು, ಈ ಬಾರಿ ಡ್ರೈವರ್‌ಗೆ ವಾಹನ ಚಲಾಯಿಸಲು ಕೊಟ್ಟಿದ್ದು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದಾರೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಿಕ್ಕಿ ರೈ ಮೂಗು ಮತ್ತು ಕೈಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚಿನ ವಿವರಗಳು

  • ದಾಳಿ ರಿಕ್ಕಿ ರೈ ಮನೆ ಸಮೀಪವೇ ನಡೆದಿದ್ದು, ದುಷ್ಕರ್ಮಿ ಕಾಂಪೌಂಡ್‌ನಲ್ಲಿ ಲುಕ್ ಆಗಿ ಶಾಟ್‌ಗನ್ ಬಳಸಿ 70mm ಬೌಲಟ್‌ಗಳಿಂದ ಫೈರಿಂಗ್ ಮಾಡಿದ್ದಾರೆ.
  • ಕಾರಿನ ಡೋರ್ ಹಾಗೂ ಸೀಟುಗಳಿಗೆ ಗುಂಡು ತಾಗಿದ್ದು, ರಿಕ್ಕಿ ರೈ ಮತ್ತು ಚಾಲಕನಿಗೆ ಗಾಯವಾಗಿದೆ.
  • ಈ ಘಟನೆಯು ಪೂರ್ವ ಯೋಜಿತ ಸಂಚು ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ದುಷ್ಕರ್ಮಿ ಶಾರ್ಪ್ ಶೂಟರ್ ಆಗಿದ್ದ ಸಾಧ್ಯತೆ ಇದೆ.
  • ಸ್ಥಳದಿಂದ ಎರಡು ಗುಂಡುಗಳು ಹಾಗೂ ಒಂದು ಮೊಬೈಲ್ ಪೋನ್ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page