back to top
22.5 C
Bengaluru
Wednesday, September 17, 2025
HomeIndiaJharkhand encounter: 5 ಲಕ್ಷ ಬಹುಮಾನಿತ ನಕ್ಸಲ್ ಹತ, ಮತ್ತೊಬ್ಬನ ಬಂಧನ

Jharkhand encounter: 5 ಲಕ್ಷ ಬಹುಮಾನಿತ ನಕ್ಸಲ್ ಹತ, ಮತ್ತೊಬ್ಬನ ಬಂಧನ

- Advertisement -
- Advertisement -

ಜಾರ್ಖಂಡ್ ರಾಜ್ಯದ ಲತೇಹಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯು ನಡೆಸಿದ ಕಾರ್ಯಾಚರಣೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನಿತ ಮಾವೋವಾದಿ ಮನೀಶ್ ಯಾದವ್ ಎನ್ಕೌಂಟರ್‌ನಲ್ಲಿ (encounter) ಹತರಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಬ್ಬ ಮಾವೋವಾದಿ ಕುಂದನ್ ಖೇರ್ವರ್ನನ್ನು ಬಂಧಿಸಲಾಗಿದೆ.

ಭಾನುವಾರ ರಾತ್ರಿ ಮೌಹದಂದ್ ಪೊಲೀಸ್ ಠಾಣೆ ವ್ಯಾಪ್ತಿಯ ದೌನಾ ಅರಣ್ಯ ಪ್ರದೇಶದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ನಕ್ಸಲರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿಯು ನಡೆದಿದೆ. ಈ ವೇಳೆ ಮನೀಶ್ ಯಾದವ್ ಹತನಾಗಿದ್ದು, ಕುಂದನ್ ಖೇರ್ವರ್ ಬಂಧನಕ್ಕೆ ಒಳಗಾಗಿದ್ದಾನೆ ಎಂದು ಪಲಾಮು ಡಿಐಜಿ ವೈ.ಎಸ್. ರಮೇಶ್ ತಿಳಿಸಿದ್ದಾರೆ. ಕುಂದನ್ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆದರೂ ಈ ಮಾಹಿತಿ ದೃಢಪಡಿಸಲು ತನಿಖೆ ನಡೆಯುತ್ತಿದೆ.

ಇದರ ಕೆಲವೇ ದಿನಗಳ ಹಿಂದೆ, ಮೇ 24 ರಂದು ಭದ್ರತಾ ಪಡೆಗಳು ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹರಾ ಹಾಗೂ ಆತನ ಸಹಚರ ಪ್ರಭಾತ್ ಗಂಜುರನ್ನು ಎನ್ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದವು. ಲೋಹರಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 98 ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಆಗಿದ್ದ. ಅವನ ತಲೆಗೆ ಕೂಡ 10 ಲಕ್ಷ ಬಹುಮಾನವಿತ್ತು.

ಈ ಎನ್ಕೌಂಟರ್‌ಗಳು ರಾಜ್ಯದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಭಾಗವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page