ಇಂದೋರಿನ ರಾಜಾ ರಘುವಂಶಿ ಹತ್ಯೆ ಪ್ರಕರಣವು (Raja Raghuvanshi murder case) ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಅವರು ಮದುವೆಯಾಗಿದ್ದು ಕೇವಲ ಒಂದು ತಿಂಗಳು ಮಾತ್ರ. ಹನಿಮೂನ್ ಗಾಗಿ ಪತ್ನಿ ಸೋನಮ್ ರಘುವಂಶಿಯೊಂದಿಗೆ ಶಿಲ್ಲಾಂಗಿಗೆ ಹೋಗಿದ್ದ ವೇಳೆ, ರಾಜಾ ಕೊಲೆಯಾದರು. ಸೋನಮ್ ಅವರು ರಾಜಾರನ್ನು ಕೊಲೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಸೋನಮ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ಬಗ್ಗೆ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana) ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಬರೆದಿರುವುದು ಹೀಗಿದೆ:
“ಹೆತ್ತವರ ಭಯದಿಂದ ಮದುವೆ ನಿರಾಕರಿಸಲಾಗದು ಎನ್ನುವುದು ಅಸಂಬದ್ಧ. ಆದರೆ ಅದೇ ಮಹಿಳೆ ಗಂಡನನ್ನು ಕೊಲ್ಲಲು ಸುಪಾರಿ ಕೊಲೆಗಾರನನ್ನು ಬಳಸಿದಳು! ವಿಚ್ಛೇದನ ಪಡೆದು ಬೇರೊಬ್ಬರ ಜೊತೆ ಹೋಗಬಹುದಿತ್ತು. ಇದು ಕ್ರೂರ, ಅಸಂಬದ್ಧ ಮತ್ತು ಮೂರ್ಖತನದ ಉದಾಹರಣೆ.
ನಾವು ಮೂರ್ಖರನ್ನು ಕಂಡು ನಗುತ್ತೇವೆ, ಅವರನ್ನು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇಂತಹ ಮೂರ್ಖರು ಸಮಾಜಕ್ಕೆ ದೊಡ್ಡ ಅಪಾಯ. ಬುದ್ಧಿವಂತರು ನಂಬಿಕೆ ತೋರಿಸುತ್ತಾ calculative ಆಗಿರಬಹುದು. ಆದರೆ ಮೂರ್ಖರಿಗೆ ತಾವು ಏನು ಮಾಡುತ್ತಿದ್ದಾರೆಂಬೂ ಅರ್ಥವಾಗದು.
ನಿಮ್ಮ ಸುತ್ತಲಿರುವ ಮೂರ್ಖತನದ ಬಗ್ಗೆ ಸದಾ ಎಚ್ಚರದಿಂದಿರಿ.”
ಘಟನೆಯ ಹಿನ್ನೆಲೆ: ಮೇ 21ರಂದು ರಾಜಾ ಮತ್ತು ಸೋನಮ್ ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಅವರು ಕಾಮಾಖ್ಯ ದೇವಿ ಮಂದಿರಕ್ಕೆ ಹೋಗಿ ಬಳಿಕ ಶಿಲ್ಲಾಂಗ್ಗೂ ತೆರಳಿದರು. ಜೂನ್ 2ರಂದು ಶಿಲ್ಲಾಂಗ್ನ ಕಣಿವೆಯಲ್ಲಿ ರಾಜಾರ ಮೃತದೇಹ ಪತ್ತೆಯಾಯಿತು. ತನಿಖೆ ನಡೆಸಿದ ಪೊಲೀಸರು ಮೂರು ಜನರನ್ನು ಬಂಧಿಸಿದ್ದಾರೆ. ಜೂನ್ 10ರಂದು ಪತ್ನಿ ಸೋನಮ್ ರಘುವಂಶಿ ಯುಪಿಯ ಘಾಜಿಪುರದಲ್ಲಿ ಶರಣಾಗಿದ್ದಾರೆ.
ಈ ಪ್ರಕರಣ ಇಡೀ ದೇಶದಲ್ಲಿ ಆಘಾತ ಉಂಟುಮಾಡಿದ್ದು, ಕಂಗನಾಳಂತಹ ವ್ಯಕ್ತಿಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.