Delhi: ಅಂಡಮಾನ್ (Andaman) ಸಮುದ್ರದ ಅಡಿಯಲ್ಲಿ ಸಾವಿರಾರು ಕೋಟಿ ಲೀಟರ್ ಕಚ್ಛಾ ತೈಲ ಇರಬಹುದು ಎಂಬ ಪ್ರಮುಖ ಮಾಹಿತಿ ಹೊರಬಿದ್ದಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ವಿಷಯವನ್ನು “ದಿ ನ್ಯೂ ಇಂಡಿಯನ್” ಮಾಧ್ಯಮದೊಂದಿಗೆ ಮಾತನಾಡುತ್ತಾ ಹಂಚಿಕೊಂಡಿದ್ದಾರೆ.
ಅವರ ಹೇಳಿಕೆಯ ಪ್ರಕಾರ, ಅಂಡಮಾನ್ ಸಮುದ್ರದ ಅಡಿಯಲ್ಲಿ 1,84,440 ಕೋಟಿ ಲೀಟರ್ ಕಚ್ಚಾ ತೈಲ ಇರುವ ಸಾಧ್ಯತೆ ಇದೆ. ಇದು ಒಟ್ಟು 11.6 ಬಿಲಿಯನ್ ಬ್ಯಾರಲ್ ಆಗುತ್ತೆ. ಇಂತಹಷ್ಟು ಪ್ರಮಾಣದ ತೈಲ ದೊರೆತರೆ, ಅದು ಭಾರತವನ್ನು 20 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕರೆದೊಯ್ಯಬಲ್ಲದು ಎನ್ನುತ್ತಾರೆ ಅವರು.
ಭಾರತದ ಒಎನ್ಜಿಸಿ (ONGC) ಮತ್ತು ಇತರ ಸಂಸ್ಥೆಗಳು ವಿವಿಧ ಕಡೆ ತೈಲ ಅನ್ವೇಷಣೆ ಮಾಡುತ್ತಿವೆ. ಇತ್ತೀಚೆಗೆ ಗಯಾನಾದಲ್ಲಿ ದೊರೆತ ಭಾರೀ ತೈಲ ನಿಕ್ಷೇಪದಂತೆ ಅಂಡಮಾನ್ ಸಮುದ್ರದಲ್ಲಿಯೂ ಇದೇ ರೀತಿಯ ಭಾರಿ ಪ್ರಮಾಣದ ತೈಲ ಇರಬಹುದು ಎಂಬ ನಿರೀಕ್ಷೆ ಇದೆ.
ಅಂಡಮಾನ್ ಸಮುದ್ರದ ತಳಭಾಗದಲ್ಲಿ ತೈಲ ಇರುವ ಸುಳಿವು ನೀಡುವ ಪದಾರ್ಥಗಳು ಪತ್ತೆಯಾಗಿವೆ. ಇದನ್ನು ಆಧಾರಮಾಡಿಕೊಂಡು ಹೆಚ್ಚಿನ ಅನ್ವೇಷಣೆ ನಡೆಯುತ್ತಿದೆ.
ಇಷ್ಟು ತೈಲ ಇರಬಹುದು ಅನ್ನೋದು ಉತ್ಸಾಹದ ವಿಷಯವೇನೂ ಸರಿ. ಆದರೆ, ಅದನ್ನು ಹೊರತೆಗೆಯುವುದು ತೀವ್ರ ದುಬಾರಿ ಹಾಗೂ ಸಮಯವೊಂದಿಗೇ ಜಟಿಲವಾದ ಕೆಲಸ. ಉದಾಹರಣೆಗೆ ಗಯಾನಾದಲ್ಲಿ 41 ಬಾವಿಗಳನ್ನು ಕೊರೆದ ಬಳಿಕ ಮಾತ್ರ ತೈಲ ಸಿಕ್ಕಿತು. ಅಂತಹ ಕಾರ್ಯಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತದೆ.
ಈ ತೈಲ ಸಂಗ್ರಹ ದೃಢಪಟ್ಟರೆ, ಭಾರತದ ತೈಲ ಆಮದು ಅವಲಂಬನೆ ಬಹಳಷ್ಟು ಕಡಿಮೆಯಾಗಬಹುದು. ಈ ಮೂಲಕ ದೇಶದ ವಿದೇಶಿ ವಿನಿಮಯ ಉಳಿಯುತ್ತದೆ, ಆರ್ಥಿಕತೆ ಬಲಗೊಳ್ಳುತ್ತದೆ.
ಇಂದು ಭಾರತ ತನ್ನ 90% ಕ್ಕಿಂತ ಹೆಚ್ಚು ಪೆಟ್ರೋಲ್ ಮತ್ತು ಡೀಸಲ್ ಅಗತ್ಯಕ್ಕಾಗಿ ವಿದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತೆ. ಅಂಡಮಾನ್ ತೈಲ ಉಪಯೋಗದಲ್ಲಿ ಇದನ್ನು ತಡೆಯಬಹುದಾದಷ್ಟು ಸಾಮರ್ಥ್ಯವಿದೆ.
ಭಾರತದಲ್ಲಿ ಅಸ್ಸಾಂ, ಗುಜರಾತ್, ರಾಜಸ್ಥಾನ, ಮುಂಬೈ, ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ತೈಲ ಉತ್ಪಾದನೆ ನಡೆಯುತ್ತಿದೆ. ವಿಶಾಖಪಟ್ಟಣ, ಮಂಗಳೂರು, ಪಡೂರ್ ಪ್ರದೇಶಗಳಲ್ಲಿ ಪೆಟ್ರೋಲಿಯಂ ಸಂಗ್ರಹ ಕೇಂದ್ರಗಳೂ ಇವೆ.