Ottawa: ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ (Canada Prime Minister Mark Carney) ಅವರು, “ನಾವು ಭಯೋತ್ಪಾದನೆ ವಿರುದ್ಧ ಸ್ಪಷ್ಟ ನಿಲುವು ಹೊಂದಿದ್ದೇವೆ” ಎಂದು ತಿಳಿಸಿದ್ದಾರೆ. ಈ ಹೇಳಿಕೆ ಅವರು ಕೆನಡಾದ ಇತಿಹಾಸದಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿ — ಏರ್ ಇಂಡಿಯಾ ಕಾನಿಷ್ಕಾ ವಿಮಾನ ಸ್ಪೋಟದ 40ನೇ ವರ್ಷದ ಸ್ಮರಣೆಯಲ್ಲಿ ನೀಡಿದರು.
ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ತಟ್ಟಿದಕಾರ್ನಿ, “ಸಮುದಾಯದ ಭದ್ರತೆಗೆ ಬದ್ಧರಾಗಿದ್ದು, ಭಯೋತ್ಪಾದನೆ ವಿರೋಧಿ ಕ್ರಮಗಳನ್ನು ನಮ್ಮ ಮಿತ್ರರ ಜೊತೆಗೆ ಕೈಗೆತ್ತಿಕೊಂಡಿದ್ದೇವೆ” ಎಂದರು.
ಕೆನಡಾ ಪ್ರತಿಪಕ್ಷದ ನಾಯಕ ಚಂದ್ರ ಆರ್ಯ ಮಾತನಾಡಿ, “ದ್ವೇಷ, ವಿಭಜನೆ ಮತ್ತು ಅಸಹಿಷ್ಣುತೆ ವಿರುದ್ಧ ನಾವು ಒಟ್ಟಾಗಿ ನಿಲ್ಲಬೇಕು” ಎಂದು ಹೇಳಿದ್ದಾರೆ.
1985ರ ಜೂನ್ 23ರಂದು ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ 182 (ಕಾನಿಷ್ಕ) ಸ್ಪೋಟಗೊಂಡು 329 ಜನರು ಮೃತಪಟ್ಟರು. ಬಾಂಬ್ ಇಟ್ಟಿದ್ದರು ಎಂಬ ಆರೋಪ ಖಲಿಸ್ತಾನಿ ಭಯೋತ್ಪಾದಕರ ಮೇಲೆ ಹೊರಬಿದ್ದಿತ್ತು. ಮೃತರಲ್ಲಿ 280 ಮಂದಿ ಕೆನಾಡಿಗರು ಹಾಗೂ ಉಳಿದವರು ಭಾರತೀಯರು.
2025ರ ಮಾರ್ಚ್ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಮಾರ್ಕ್ ಕಾರ್ನಿ, ಅಧಿಕಾರಕ್ಕೆ ಬಂದ ನಂತರ ಭಾರತ-ಕೆನಡಾ ಸಂಬಂಧವನ್ನು ಪುನರ್ ಸ್ಥಾಪನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. 2023ರಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತವನ್ನು ಆರೋಪಿಸಿದ ಜಸ್ಟಿನ್ ಟ್ರುಡೊ ಮಾತುಗಳಿಂದ ಉಂಟಾದ ಬಿರುಕು ಹೀಗೆಯೇ ಹಿಂದೆ ಸಾಗುತ್ತಿದೆ.