back to top
24.8 C
Bengaluru
Friday, June 27, 2025
HomeNewsTerrorism ಕುರಿತ ಅಸ್ಪಷ್ಟ ನಿಲುವಿಗೆ ಭಾರತ ವಿರೋಧ: Shanghai meet ನಲ್ಲಿ ಜಂಟಿ ಹೇಳಿಕೆಗೆ ಸಹಿ...

Terrorism ಕುರಿತ ಅಸ್ಪಷ್ಟ ನಿಲುವಿಗೆ ಭಾರತ ವಿರೋಧ: Shanghai meet ನಲ್ಲಿ ಜಂಟಿ ಹೇಳಿಕೆಗೆ ಸಹಿ ಹಾಕದ ಭಾರತ

- Advertisement -
- Advertisement -

China, Qingdao: ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಸ್ಪಷ್ಟ ನಿಲುವು ಇಲ್ಲದಿದ್ದ ಕಾರಣ ಭಾರತವು ಶಾಂಘೈ ಸಹಕಾರ(Shanghai meet) ಸಂಘಟನೆಯ (SCO) ರಕ್ಷಣಾ ಸಚಿವರ ಸಭೆಯ ಜಂಟಿ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದೆ. ಇದರಿಂದ ಪಾಕಿಸ್ತಾನ ಮತ್ತು ಅದರ ಬೆಂಬಲಿಗ ರಾಷ್ಟ್ರಗಳಿಗೆ ಭಾರತ ಕಠಿಣ ಸಂದೇಶವೊಂದನ್ನು ನೀಡಿದೆ.

ಈ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದರು. ಜಂಟಿ ಹೇಳಿಕೆಯಲ್ಲಿ ಪಾಕಿಸ್ತಾನದ ಪ್ರಾಯೋಜಿತ ಉಗ್ರವಾಡದ ಕುರಿತು ಯಾವುದೇ ನಿಖರ ಉಲ್ಲೇಖವಿಲ್ಲದ ಕಾರಣ ಭಾರತ ಸಹಿ ಹಾಕಲಿಲ್ಲ.

ಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, “ಉಗ್ರವಾದಿಗಳಿಗೆ ಮತ್ತು ಅವರನ್ನು ಬೆಂಬಲಿಸುವವರಿಗೆ ಶಸ್ತಿತಾಂತ್ರಿಕವಾಗಿ ಹೊಣೆಗಾರಿಕೆ ವಿಧಿಸಬೇಕು. ಇಲ್ಲದಿದ್ದರೆ ರಾಷ್ಟ್ರಗಳ ನಡುವೆ ಶಾಂತಿ ಸಾಧ್ಯವಿಲ್ಲ” ಎಂದು ಹೇಳಿದರು. ಅವರು ಪಾಕಿಸ್ತಾನವನ್ನು ಪರೋಕ್ಷವಾಗಿ ಗುರಿಯಾಗಿಸಿದರು.

ಅವರು ಮುಂದಾಗಿ, “ಭಯೋತ್ಪಾದನೆ ಎದುರಿಸಲು ಎಲ್ಲ SCO ಸದಸ್ಯ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಉಗ್ರತನಕ್ಕೆ ಪ್ರತಿಕ್ರಿಯಿಸುವಲ್ಲಿ ಎರಡು ತಾರತಮ್ಯದ ಧೋರಣೆ ಇರಬಾರದು” ಎಂದರು.

ಇನ್ನೂ ಕೆಲ ರಾಷ್ಟ್ರಗಳು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದನ್ನು ಉಲ್ಲೇಖಿಸಿ, “ಇದರಿಂದ ಶಾಂತಿ ಮತ್ತು ಅಭಿವೃದ್ಧಿ ಅಸಾಧ್ಯವಾಗುತ್ತದೆ. ಈ ಬೆದರಿಕೆಯನ್ನು ಎದುರಿಸಲು ನಾವು ಗಟ್ಟಿಯಾಗಿ ಮುಂದೆ ಬರಬೇಕು” ಎಂದು ಕರೆ ನೀಡಿದರು.

ಭಾರತ ಈ ಜಂಟಿ ಹೇಳಿಕೆಗೆ ಸಹಿ ಹಾಕದ ಕಾರಣ ಈ ಬಾರಿಯ ಸಭೆ ಯಾವುದೇ ಅಧಿಕೃತ ಪ್ರಕಟಣೆಯಿಲ್ಲದೇ ಮುಕ್ತಾಯವಾಯಿತು. ಈ ಸಭೆಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿ ಒಟ್ಟು 9 ರಾಷ್ಟ್ರಗಳು ಪಾಲ್ಗೊಂಡಿದ್ದವು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page