New Delhi: 2025-26ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾಗಿದ್ದ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ (Pradhan Mantri Dhan-Dhanya Krishi Yojana) ಇಂದು ಕೇಂದ್ರ ಸಚಿವ ಸಂಪುಟದಿಂದ ಹಸಿರು ನಿಶಾನೆ ಸಿಕ್ಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶಗಳು
- ಕೃಷಿ ಉತ್ಪಾದನೆ ಹೆಚ್ಚಿಸುವುದು
- ಬೆಳೆಗಳಲ್ಲಿ ವೈವಿಧ್ಯತೆ ತರುವುದು
- ಸುಸ್ಥಿರ ಕೃಷಿಗೆ ಉತ್ತೇಜನ ನೀಡುವುದು
- ಸುಗ್ಗಿಯ ನಂತರ ಗೋದಾಮು ಮತ್ತು ಸಂಗ್ರಹಣೆ ಸುಧಾರಣೆ
- ನೀರಾವರಿ ವ್ಯವಸ್ಥೆ ಉತ್ತಮಗೊಳಿಸಿ ಸಾಲ ಲಭ್ಯತೆ ಸುಲಭಗೊಳಿಸುವುದು
ಈ ಯೋಜನೆಯು 100 ಜಿಲ್ಲೆಗಳ 1.7 ಕೋಟಿ ರೈತರಿಗೆ ನೆರವಾಗಲಿದೆ. ಯೋಜನೆ ಜಾರಿಗೆ ವರ್ಷಕ್ಕೆ ₹24,000 ಕೋಟಿ ರೂಪಾಯಿ ಮಂಜೂರಾಗಿದ್ದು, ಕನಿಷ್ಠ 6 ವರ್ಷಗಳ ಕಾಲ ಈ ವೆಚ್ಚವನ್ನು ಭರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಯೋಜನೆವು ಈಗಾಗಲೇ ಕಾರ್ಯನ್ವಯವಾಗಿರುವ 36 ಯೋಜನೆಗಳು, ರಾಜ್ಯ ಯೋಜನೆಗಳು ಹಾಗೂ ಖಾಸಗಿ ವಲಯದ ಸಹಭಾಗಿತ್ವದೊಂದಿಗೆ ಜಾರಿಗೊಳ್ಳಲಿದೆ.
100 ಜಿಲ್ಲೆಗಳನ್ನು ಆಯ್ಕೆ ಮಾಡುವ ವಿಧಾನ
- ಕಡಿಮೆ ಕೃಷಿ ಉತ್ಪಾದನೆ, ಕಡಿಮೆ ಇಳುವರಿ, ಕಡಿಮೆ ಹಣದ ಹರಿವು ಇರುವ ಜಿಲ್ಲೆಗಳ ಆಯ್ಕೆ
- ಪ್ರತಿ ರಾಜ್ಯದಿಂದ ಕನಿಷ್ಠ 1 ಜಿಲ್ಲೆ ಆಯ್ಕೆ
- ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ
ಪ್ರತಿ ಜಿಲ್ಲೆಯಲ್ಲಿ “ಧನ್-ಧಾನ್ಯ ಸಮಿತಿ” ರಚನೆಯಾಗಲಿದ್ದು, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಯೋಜನೆ ರೂಪಿಸಲು ಪ್ರಗತಿಪರ ರೈತರು ಕೂಡ ಸದಸ್ಯರಾಗುತ್ತಾರೆ.
ಈ ಯೋಜನೆ ರೈತರ ಬದುಕು ಸುಧಾರಿಸಲು, ಉತ್ಪಾದನೆ ಹೆಚ್ಚಿಸಲು ಮತ್ತು ನೀರಾವರಿ, ಸಂಗ್ರಹಣೆಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡಲು ಉದ್ದೇಶಿತ ಯೋಜನೆಯಾಗಿದೆ.