back to top
18.8 C
Bengaluru
Wednesday, November 26, 2025
HomeBusinessಬಂಡವಾಳ ವೆಚ್ಚದಲ್ಲಿ ಹಿಂದೆ State Government; ಪಂಚ ಗ್ಯಾರಂಟಿಗೆ ಹೆಚ್ಚು ಆದ್ಯತೆ

ಬಂಡವಾಳ ವೆಚ್ಚದಲ್ಲಿ ಹಿಂದೆ State Government; ಪಂಚ ಗ್ಯಾರಂಟಿಗೆ ಹೆಚ್ಚು ಆದ್ಯತೆ

- Advertisement -
- Advertisement -

Bengaluru: 2025-26 ಬಜೆಟ್ ವರ್ಷದ ಮೊದಲ ಮೂರು ತಿಂಗಳಲ್ಲಿ (ಏಪ್ರಿಲ್-ಜೂನ್) ರಾಜ್ಯ ಸರ್ಕಾರ (State government) ಕೇವಲ ₹5,396 ಕೋಟಿ ರೂಪಾಯಿಯನ್ನು ಬಂಡವಾಳ ವೆಚ್ಚಕ್ಕಾಗಿ ಖರ್ಚು ಮಾಡಿದೆ. ಇದು ಒಟ್ಟು ಬಜೆಟ್ ಅಂದಾಜಿನಲ್ಲಿ ಕೇವಲ 7.56% ಮಾತ್ರವಾಗಿದೆ. ಹೀಗಾಗಿ, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ತೀರಾ ನಿಧಾನವಾಗಿದೆ ಎಂಬ ಆರೋಪಗಳು ಎದ್ದಿವೆ.

ಇನ್ನೊಂದೆಡೆ, ಕಾಂಗ್ರೆಸ್ ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೇ ಅವಧಿಯಲ್ಲಿ ₹6,321 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಇದರರ್ಥ, ಪಂಚ ಗ್ಯಾರಂಟಿಗೆ 12.40% ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯ ಸರ್ಕಾರ 2025-26 ಬಜೆಟ್‌ನಲ್ಲಿ ₹71,336 ಕೋಟಿ ಬಂಡವಾಳ ವೆಚ್ಚದ ಗುರಿ ಹೊಂದಿದ್ದರೂ, ಮೊದಲ ತ್ರೈಮಾಸಿಕದಲ್ಲಿ ಅದಕ್ಕೆ ತಕ್ಕಷ್ಟು ವೆಚ್ಚ ಮಾಡಿಲ್ಲ. ಇತ್ತ, ‌ರಾಜಸ್ವ ವೆಚ್ಚ (ವೇತನ, ಪಿಂಚಣಿ, ಯೋಜನೆ ಸಹಾಯಧನ ಮುಂತಾದವು) ₹61,651 ಕೋಟಿ ರೂ. ಆಗಿದ್ದು, ಇದು 20% ವೆಚ್ಚವಾಗಿದೆ.

  • ಹಣಕಾಸು ಇಲಾಖೆಯ ಮಾಹಿತಿ ಪ್ರಕಾರ
  • ಏಪ್ರಿಲ್‌ನಲ್ಲಿ ಬಂಡವಾಳ ವೆಚ್ಚ: ₹79.92 ಕೋಟಿ
  • ಮೇನಲ್ಲಿ: ₹1,923 ಕೋಟಿ
  • ಜೂನ್‌ನಲ್ಲಿ: ₹3,392 ಕೋಟಿ

ಹಳೆ ಬಜೆಟ್ ವರ್ಷ (2024-25) ಮೊದಲ ತ್ರೈಮಾಸಿಕದಲ್ಲಿ ಬಂಡವಾಳ ವೆಚ್ಚ 8.24% ಆಗಿತ್ತು, ಇದು ಈ ಬಾರಿ ಕಡಿಮೆಯಾಗಿದೆ.

ಇದರಿಂದ, ಪಕ್ಷಾಂತರ ಶಾಸಕರು ಸೇರಿದಂತೆ ಹಲವರು ಅಭಿವೃದ್ಧಿ ಕಾರ್ಯಗಳ ಕುಂಠಿತತೆಯ ಬಗ್ಗೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪಂಚ ಗ್ಯಾರಂಟಿಗಳಿಗೆ ಹೆಚ್ಚು ಹಣ ಮೀಸಲಿಡುತ್ತಿರುವ ಕಾರಣ, ಮೂಲಸೌಕರ್ಯ ಅಭಿವೃದ್ಧಿಗೆ ಸೂಕ್ತ ಅನುದಾನದ ಕೊರತೆ ಉಂಟಾಗಿದೆ ಎಂಬುದು ವಿರೋಧಿ ಪಕ್ಷಗಳ ಪ್ರಮುಖ ಆಕ್ಷೇಪವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page