HomeKarnatakaInternational Islamic Conference ವಿವಾದ – ದೂರು, ಸರ್ಕಾರದ ನಿಗಾ ಹಾಗೂ ತನಿಖೆ

International Islamic Conference ವಿವಾದ – ದೂರು, ಸರ್ಕಾರದ ನಿಗಾ ಹಾಗೂ ತನಿಖೆ

- Advertisement -
- Advertisement -

ಬೆಂಗಳೂರು ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 5ರಂದು ಮಿಲಾದ್ ಕಮಿಟಿ ಅಂತಾರಾಷ್ಟ್ರೀಯ ಇಸ್ಲಾಂ (International Islamic Conference) ಸಮಾವೇಶ ಹಮ್ಮಿಕೊಂಡಿದೆ. ಈ ಸಮಾವೇಶಕ್ಕೆ ಹಲವು ದೇಶಗಳಿಂದ ಧರ್ಮಗುರುಗಳು ಹಾಗೂ ಮೌಲ್ವಿಗಳು ಆಗಮಿಸುವ ನಿರೀಕ್ಷೆಯಿದೆ. ವಿದೇಶಿಗರು ವೀಸಾ ನಿಯಮ ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ಹಿಂದೂ ಮುಖಂಡ ತೇಜಸ್ ಎ.ಗೌಡ ಅವರು ನಗರದ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಕೇಂದ್ರದ ನಿಯಮ ಪ್ರಕಾರ ಮಿಷನರಿ, ಪ್ರವಾಸಿ ಅಥವಾ ಸಮ್ಮೇಳನ ವೀಸಾ ಹೊಂದಿರುವವರು ಭಾರತದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಧಾರ್ಮಿಕ ಭಾಷಣ ಮಾಡುವುದೂ ನಿಷಿದ್ಧ. ಆದರೆ ವಿದೇಶಿ ಮೌಲ್ವಿಗಳು ಭಾಗಿಯಾದರೆ ಅದು ಸುರಕ್ಷತೆ ಹಾಗೂ ಸಂವಿಧಾನಕ್ಕೆ ಹಾನಿ ಮಾಡಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ FRRO ಅಧಿಕಾರಿಗೂ ದೂರು ಸಲ್ಲಿಸಲಾಗಿದೆ.

ಗೃಹ ಸಚಿವ ಜಿ.ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, ಆಯೋಜಕರಿಗೆ ವಿದೇಶಿ ವ್ಯಕ್ತಿಗಳನ್ನು ಕರೆಯಿಸದಂತೆ ಸೂಚನೆ ನೀಡಲಾಗಿದೆ ಎಂದರು. ವೀಸಾ ನಿಯಮ ಉಲ್ಲಂಘನೆ ವಿಚಾರದಲ್ಲಿ FRRO ನಿಗಾ ವಹಿಸಲಿದೆ. ಧರ್ಮಗುರುಗಳು ಸಮಾವೇಶದಲ್ಲಿ ಹಾಜರಾಗುವುದೂ ನಿಷಿದ್ಧ ಎಂದು ಹೇಳಿದರು. ಸರ್ಕಾರ ಕಾರ್ಯಕ್ರಮದ ಮೇಲೆ ನಿಗಾವಹಿಸಲಿದೆ. ಇದೇ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂದರು.

ಧರ್ಮಸ್ಥಳ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ತನಿಖಾ ತಂಡವು ಯಾವ ದಿಕ್ಕಿನಲ್ಲಿ ತನಿಖೆ ನಡೆಸುತ್ತದೆ ಎಂಬುದು ಅವರಿಗೆ ತಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ತನಿಖೆಯಲ್ಲಿ ತೀರ್ಮಾನ ಕೈಗೊಳ್ಳುವುದಿಲ್ಲ, ಎಲ್ಲ ತೀರ್ಮಾನವನ್ನೂ SIT ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!