back to top
25.2 C
Bengaluru
Wednesday, October 8, 2025
HomeKarnatakaಸರ್ಕಾರದ ಮನವಿಗೆ Wipro ತಿರಸ್ಕಾರ – CM ಗೆ ನಿರಾಸೆ

ಸರ್ಕಾರದ ಮನವಿಗೆ Wipro ತಿರಸ್ಕಾರ – CM ಗೆ ನಿರಾಸೆ

- Advertisement -
- Advertisement -

Bengaluru: ಬೆಂಗಳೂರಿನ ವರ್ತೂರು ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸಿಎಂ ಸಿದ್ದರಾಮಯ್ಯ ಅವರು ವಿಪ್ರೋ ಕ್ಯಾಂಪಸ್‌ನ್ನು ಸಾರ್ವಜನಿಕ ವಾಹನ ಸಂಚಾರಕ್ಕೆ ತೆರೆದಿಡಲು ಮನವಿ ಮಾಡಿದ್ದರು. ಆದರೆ, ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್‌ಜೀ ಅವರು ಈ ಮನವಿಯನ್ನು ತಿರಸ್ಕರಿಸಿದ್ದಾರೆ.

ವಿಪ್ರೋ ಕ್ಯಾಂಪಸ್ SEZ ಪ್ರದೇಶವಾಗಿದ್ದು, ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಹೊಂದಿದೆ. ಅದರಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ರೇಮ್‌ಜೀ ಅವರು ನೇರವಾಗಿ ಮನವಿಯನ್ನು ತಿರಸ್ಕರಿಸದೆ, ದೀರ್ಘಕಾಲಿಕ ಪರಿಹಾರಕ್ಕಾಗಿ ಸರ್ಕಾರದೊಂದಿಗೆ ಚರ್ಚೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸರ್ಜಾಪುರದ ವಿಪ್ರೋ ಕ್ಯಾಂಪಸ್ ಖಾಸಗಿ ಆಸ್ತಿಯಾಗಿದ್ದು, ಜಾಗತಿಕ ಗ್ರಾಹಕರಿಗೆ ಸೇವೆ ನೀಡುವ ವಿಶೇಷ ಆರ್ಥಿಕ ವಲಯವಾಗಿದೆ. ಇಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದು ಶಾಶ್ವತ ಪರಿಹಾರವಲ್ಲ ಎಂದು ಸಂಸ್ಥೆ ತಿಳಿಸಿದೆ. ಬದಲಿಗೆ ವೈಜ್ಞಾನಿಕ ಅಧ್ಯಯನ ಮಾಡಿ, ದೀರ್ಘಕಾಲಿಕ ಯೋಜನೆ ರೂಪಿಸುವುದು ಸೂಕ್ತ ಎಂದು ಸಲಹೆ ನೀಡಿದೆ.

ವಿಪ್ರೋ ಸಂಸ್ಥೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದೊಂದಿಗೆ ಸಹಕಾರ ನೀಡಲು ಸಿದ್ಧವಾಗಿದೆ. ರೇಶ್ಮಿ ಶಂಕರ್ ಅವರ ನೇತೃತ್ವದ ತಂಡ ಶೀಘ್ರದಲ್ಲೇ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page