back to top
26.3 C
Bengaluru
Friday, July 18, 2025
HomeIndiaತುರ್ತು ಪರಿಸ್ಥಿತಿಯ ನೆನಪಿನಲ್ಲಿ Amit Shah ಹೇಳಿಕೆ: ಭಾರತ ಸರ್ವಾಧಿಕಾರವನ್ನು ಎಂದಿಗೂ ಒಪ್ಪದು

ತುರ್ತು ಪರಿಸ್ಥಿತಿಯ ನೆನಪಿನಲ್ಲಿ Amit Shah ಹೇಳಿಕೆ: ಭಾರತ ಸರ್ವಾಧಿಕಾರವನ್ನು ಎಂದಿಗೂ ಒಪ್ಪದು

- Advertisement -
- Advertisement -

New Delhi: 1975ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದ ಘಟನೆಗೆ 50 ವರ್ಷಗಳು ಆಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

“ಭಾರತದ ಜನರು ಎಂದಿಗೂ ಸರ್ವಾಧಿಕಾರವನ್ನು ಒಪ್ಪುವುದಿಲ್ಲ. ಪ್ರಜಾಪ್ರಭುತ್ವ ನಮ್ಮ ರಕ್ತದಲ್ಲಿ ಮೌಲ್ಯವಾಗಿ ಇದೆ. ತುರ್ತು ಪರಿಸ್ಥಿತಿಯಂತಹ ಘಟನೆ ಮರೆಯುವುದು ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಪಾಯಕಾರಿಯಾಗಬಹುದು” ಎಂದು ಹೇಳಿದರು.

ಅಮಿತ್ ಶಾ ಕಾಂಗ್ರೆಸ್‌ನ “ಸಂವಿಧಾನ ಅಪಾಯದಲ್ಲಿದೆ” ಎಂಬ ಹೇಳಿಕೆಗೆ ತಿರುಗೇಟು ನೀಡುತ್ತಾ, 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೊದಲು ಇಂದಿರಾ ಗಾಂಧಿಯವರು ಸಂಸತ್ತಿಗೆ ಅಥವಾ ವಿರೋಧ ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದರೇ? ಎಂಬ ಪ್ರಶ್ನೆಗಳನ್ನು ಎತ್ತಿದರು.

ಅಮಿತ್ ಶಾ 2024ರಿಂದ ಪ್ರತಿ ವರ್ಷ ಜೂನ್ 25ರಂದು “ಸಂವಿಧಾನದ ಹತ್ಯೆಯ ದಿನ” (Constitution Betrayal Day) ಎಂದು ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಘೋಷಿಸಿದರು. ಇದು 1975ರ ತುರ್ತು ಪರಿಸ್ಥಿತಿಯ ವಿರುದ್ಧ ಜನಸ್ಮರಣೆಯ ದಿನವಾಗಲಿದೆ.

“50 ವರ್ಷಗಳ ಹಿಂದಿನ ಘಟನೆಯ ಸ್ಮರಣೆ Fade ಆಗಬಾರದು. ಜನರು ಯಾಕೆ ಈಗ ಮತ್ತೆ ಅದನ್ನು ಚರ್ಚಿಸಬೇಕು ಎಂದು ಕೇಳುತ್ತಾರೆ. ಆದರೆ ತುರ್ತು ಪರಿಸ್ಥಿತಿ ಭೀಕರ ಪಾಠ ಕಲಿತ ಘಟನೆ. ಅದನ್ನು ನೆನಪಿಸಿಕೊಳ್ಳುವುದು ಪ್ರಜಾಪ್ರಭುತ್ವವನ್ನು ಬಲಪಡಿಸಲು ಅವಶ್ಯಕ.” ಎಂದು ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page