back to top
25.7 C
Bengaluru
Tuesday, July 22, 2025
HomeNewsSyria ದಲ್ಲಿ ಹಿಂಸಾಚಾರ, ಭಾರತೀಯರಿಗೆ ಸೂಚನೆ!

Syria ದಲ್ಲಿ ಹಿಂಸಾಚಾರ, ಭಾರತೀಯರಿಗೆ ಸೂಚನೆ!

- Advertisement -
- Advertisement -

New Delhi: ಸಿರಿಯಾದಲ್ಲಿ (Syria) ಇಸ್ಲಾಮಿಕ್ ಬಂಡಾಯ ಗುಂಪುಗಳು ಮತ್ತು ಸರ್ಕಾರದ ನಡುವೆ ಅಂತರ್ಯುದ್ಧ ತಾರಕಕ್ಕೇರಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನಲೆಯಲ್ಲಿ, ಭಾರತೀಯ ವಿದೇಶಾಂಗ ಸಚಿವಾಲಯ ಡಿಸೆಂಬರ್ 6ರಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಪ್ರಮುಖ ಸೂಚನೆಗಳು

  • ಸಿರಿಯಾಗೆ ಅಥವಾ ಸಿರಿಯಾ ಮೂಲಕ ಯಾರೂ ಪ್ರಯಾಣಿಸಬೇಡಿ ಎಂದು ಭಾರತೀಯರಿಗೆ ಎಚ್ಚರಿಸಲಾಗಿದೆ.
  • ಸಿರಿಯಾದಲ್ಲಿ ಇರುವವರಿಗೆ ತಕ್ಷಣದ ನಿರ್ಗಮನ: ಸಿರಿಯಾದಲ್ಲಿ ಇರುವ ಭಾರತೀಯರು ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ತಕ್ಷಣ ಭಾರತಕ್ಕೆ ಹಿಂದಿರುಗುವಂತೆ ಸೂಚಿಸಲಾಗಿದೆ.
  • ಸಂಪರ್ಕ ಮಾಹಿತಿಗಳು: ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ತಿಳಿಸಲಾಗಿದೆ.
  • ತುರ್ತು ಸಂಪರ್ಕ: +963 993385973
  • ಇಮೇಲ್: hoc.domascus@mea.gov.in

ದೇಶದ ಹಲವೆಡೆ ಇಸ್ಲಾಮಿಕ್ ಬಂಡಾಯ ಗುಂಪುಗಳು ದಾಳಿ ನಡೆಸಿ, ಅಲೆಪ್ಪೋ ಮತ್ತು ಹಮಾ ಸೇರಿದಂತೆ ಕೆಲವು ನಗರಗಳನ್ನು ವಶಪಡಿಸಿಕೊಂಡಿವೆ. ಡಮಾಸ್ಕಸ್ ಹತ್ತಿರದ ಪ್ರದೇಶಗಳಲ್ಲಿ ಬಂಡಾಯ ಗುಂಪು ಪ್ರಭಾವ ಹೆಚ್ಚಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮತ್ತು ನಾಗರಿಕ ಪ್ರದೇಶಗಳಲ್ಲಿ ದಾಳಿ ನಡೆಸುವ ಘಟನೆಗಳು ವರದಿಯಾಗಿವೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಸಿರಿಯಾದಲ್ಲಿ ಸದ್ಯ 90 ಭಾರತೀಯರು ಇದ್ದಾರೆ, ಇದರಲ್ಲಿ 14 ಮಂದಿ ಯುಎನ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸುರಕ್ಷತೆಗೆ ಸಂಬಂಧಿಸಿದಂತೆ ನಿರಂತರವಾಗಿ ಗಮನಿಸಲಾಗುತ್ತಿದೆ.

ರಷ್ಯಾ ಮತ್ತು ಇರಾನ್ ಬೆಂಬಲಿತ ಬಶರ್ ಅಲ್ ಅಸ್ಸಾದ್ ಸರ್ಕಾರದ ವಿರುದ್ಧ ಬಂಡಾಯ ಗುಂಪು ತೀವ್ರ ಹೋರಾಟ ನಡೆಸುತ್ತಿದೆ. ಇತ್ತೀಚೆಗಿನ ದಾಳಿಗಳು ಮತ್ತು ಬೆದರಿಕೆಗಳು ಸ್ಥಳೀಯ ಸರ್ಕಾರದ ವಿರುದ್ಧದ ಆಕ್ರೋಶವನ್ನು ತಾರಕಕ್ಕೇರಿಸಿವೆ.

ಸಿರಿಯಾದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದ್ದರೆ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಕಷ್ಟ ಇನ್ನೂ ಹೆಚ್ಚು ಬಿಗಡಾಯಿಸಬಹುದು. ಭದ್ರತೆಗಾಗಿ, ಸಿರಿಯಾದಿಂದ ತಕ್ಷಣ ನಿರ್ಗಮಿಸಿ ಮತ್ತು ಮುಂದಿನ ಆದೇಶದವರೆಗೂ ಯಾವುದೇ ಪ್ರಯಾಣವನ್ನು ಟಾಳಲು ಕೇಂದ್ರ ಸರ್ಕಾರದ ಸೂಚನೆ ಪಾಲಿಸಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page