back to top
21.9 C
Bengaluru
Tuesday, January 13, 2026
HomeKarnatakaAtul Subhash ಆತ್ಮಹತ್ಯೆ: ಆರೋಪಿಗಳನ್ನು ಹಿಡಿದ ಪೊಲೀಸರ ರೋಚಕ ವ್ಯೂಹ

Atul Subhash ಆತ್ಮಹತ್ಯೆ: ಆರೋಪಿಗಳನ್ನು ಹಿಡಿದ ಪೊಲೀಸರ ರೋಚಕ ವ್ಯೂಹ

- Advertisement -
- Advertisement -

Bengaluru: ಉತ್ತರ ಪ್ರದೇಶ (Uttar Pradesh) ಮೂಲದ ಟೆಕ್ಕಿ ಅತುಲ್ ಸುಭಾಷ್ (Atul Subhash) ಆತ್ಮಹತ್ಯೆ ಪ್ರಕರಣದಲ್ಲಿ, ಮಾರತ್ತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಆರೋಪಿಗಳಾದ ನಿಖಿತಾ, ನಿಶಾ ಸಿಂಘಾನಿಯಾ, ಮತ್ತು ಅನುರಾಗ್‌ನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

ಆರೋಪಿ ನಿಖಿತಾ ಮತ್ತು ಆಕೆಯ ಕುಟುಂಬಸ್ಥರು ಪೊಲೀಸರ ಪ್ರವೇಶದ ಮಾಹಿತಿ ತಿಳಿದು ಪರಾರಿಯಾಗಿದ್ದರು. ಆದರೆ ಮಾರತ್ತಹಳ್ಳಿ ಪೊಲೀಸರು ಬಲೆ ಬೀಸಿದ್ದರು. ಆರೋಪಿ ನಿಖಿತಾ ಪರಾರಿಯಾಗಿರುವ ಸಮಯದಲ್ಲಿ ಪರಿಚಿತರಿಗೆ ಮಾಡಿದ ದೂರವಾಣಿ ಕಾಲಿನಿಂದ, ಆಕೆಯ ಸ್ಥಳವನ್ನು ಗುರುತಿಸಿದರು.

ನಿಖಿತಾಳ ಲೊಕೇಶನ್ ಆಧರಿಸಿ ಹರಿಯಾಣದ ಗುರುಗ್ರಾಮದಲ್ಲಿ ವಶಕ್ಕೆ ಪಡೆದರು. ನಿಖಿತಾಳ ಸಹಾಯದಿಂದ, ನಿಶಾ ಮತ್ತು ಅನುರಾಗ್‍ನ ಪ್ರಯಾಗ್​ರಾಜ್​​ ನಲ್ಲಿ ಬಂಧಿಸಿದರು.

ಬೇರೆ ರಾಜ್ಯದಲ್ಲಿ ಬಂಧಿತ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಅನುಮತಿ ಇಲ್ಲದೆ ತಕ್ಷಣ ಕರ್ನಾಟಕಕ್ಕೆ ಕರೆತಂದಿದ್ದನ್ನು ಪ್ರಶ್ನಿಸಲಾಗಿದೆ. ಆದರೆ, 24 ಗಂಟೆಯ ಒಳಗೆ Bengaluru ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಕ್ರಮದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಕಾನೂನು ಬದ್ಧತೆ ಕಾಪಾಡಿದ್ದಾರೆ.

ಪೊಲೀಸರು, ಅವಶ್ಯಕತೆ ಇರುವ ಸಂದರ್ಭದಲ್ಲಿ ಬಾಡಿ ವಾರೆಂಟ್ ಮೂಲಕ ಕಸ್ಟಡಿಗೆ ಪಡೆಯಲು ಸಿದ್ಧರಾಗಿದ್ದಾರೆ. ಜಾಮೀನುಗಾಗಿ ಮೂವರು ಆರೋಪಿಗಳು ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಈ ಕೇಸಿನ ಇನ್ನಷ್ಟು ತನಿಖೆಯಿಂದ ನಿಖಿತಾ ಮತ್ತು ಆಕೆಯ ಕುಟುಂಬದ ಕೃತ್ಯಗಳ ಬಗ್ಗೆ ಮತ್ತಷ್ಟು ಬೆಳಕಿಗೆ ಬರಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page