
Bagepalli : ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಯಿಂದ ಮಂಗಳವಾರ ತಾಲ್ಲೂಕಿನ ತೋಳ್ಳಪಲ್ಲಿ (Thollapalli) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸ್ಪಂದನ (janaspandana) ಕಾರ್ಯಕ್ರಮ ನಡೆಸಲಾಯಿತು.
ತೋಳ್ಳಪಲ್ಲಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪರಿಶಿಷ್ಟರಿಗೆ ಸ್ಮಶಾನ ಮೀಸಲಿಡುವಂತೆ, ಕುಡಿಯುವ ನೀರು, ರಸ್ತೆ, ನಿವೇಶನ, ಮನೆ, ದರಖಾಸ್ತು ಸಾಗುವಳಿ ಚೀಟಿ, ರಸ್ತೆಯ ಬದಿಯಲ್ಲಿನ ಮುಳ್ಳುಗಿಡ ತೆರವು, ಚರಂಡಿ ಸ್ವಚ್ಛತೆ, ಚಿಕಿತ್ಸೆ ನೆರವು, ಬಸ್ ಸಂಚಾರ, ಸಾಲ ಸೌಲಭ್ಯ ಕಲ್ಪಿಸುವಂತೆ 30ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದರು.
ತಹಶೀಲ್ದಾರ್ ಮನೀಷಾ ಎನ್.ಪತ್ರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಎನ್.ಮಂಜುಳ, ಎ.ವೈ.ಆಂಜನೇಯ, ಮಾರಪ್ಪ, ಗಂಗಾಧರಮೂರ್ತಿ, ಎನ್.ವೆಂಕಟೇಶಪ್ಪ, ಡಾ.ಸಿ.ಕೃಷ್ಣಮೂರ್ತಿ, ಮಹೇಶ್, ಆರ್.ಶಿವಪ್ಪ, ಶ್ರೀನಿವಾಸ್, ಲಕ್ಷ್ಮಿನರಸಿಂಹಪ್ಪ, ಪಿ.ಮಂಜುನಾಥರೆಡ್ಡಿ, ಕೆ.ಕೆ.ವೆಂಕಟೇಶ್, ಲಕ್ಷ್ಮಿಪತಿರೆಡ್ಡಿ, ಪಾಳ್ಯಂಹರೀಶ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ತೋಳ್ಳಪಲ್ಲಿಯಲ್ಲಿ ಜನಸ್ಪಂದನ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.