Home Karnataka Kolar ತೆಪ್ಪ ಬುಡಮೇಲಾಗಿ 3 ಜನ ಸಾವು

ತೆಪ್ಪ ಬುಡಮೇಲಾಗಿ 3 ಜನ ಸಾವು

Bangarapet Bangarapete Kolar Death by Drowning

Bangarapet (Bangarapete), Kolar : ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆ ಗ್ರಾಮದ ಬಳಿಯ ಕೆರೆಯಲ್ಲಿ ಬುಧವಾರ ತೆಪ್ಪ ಬುಡಮೇಲಾಗಿ ಎಸ್.ಜಿ.ಕೋಟೆ (S G Kote) ನವೀನ್ ಕುಮಾರ್(35), ಕೆರೆಕೋಡಿ ಮೋಹನ್(25), ಚಿಕ್ಕವಲಗಮಾದಿ ರಾಜೇಂದ್ರ ಕುಮಾರ್ (36) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ (Death by Drowning).

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈ ಮೂರು ಜನ ಕೆಲಸಕ್ಕಾಗಿ ಪ್ರತಿನಿತ್ಯ ಬಂಗಾರಪೇಟೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದರು. ಬುಧವಾರ ರೈಲ್ವೆ ಲೈನ್ ತಾಂತ್ರಿಕ ದೋಷದಿಂದಾಗಿ ಬೆಂಗಳೂರಿಗೆ ತೆರಳಬೇಕಿದ್ದ ರೈಲುಗಳು ಸುಮಾರು 2 ರಿಂದ 3 ತಾಸು ವಿಳಂಬವಾದ ಕಾರಣ ಬೆಂಗಳೂರಿಗೆ ತೆರಳಿರಲಿಲ್ಲ. ಹಾಗಾಗಿ ಕೆರೆಯಲ್ಲಿ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದ ಸ್ನೇಹಿತರು ಕೆರೆ ಮಧ್ಯೆ ತೆಪ್ಪ ಸಮತೋಲನ ತಪ್ಪಿದ್ದರಿಂದ ಕೆರೆಯಲ್ಲಿ ಮುಳುಗಿ ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮೂವರ ಶವಗಳನ್ನು ಹೊರತೆಗೆದಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version