back to top
20.5 C
Bengaluru
Thursday, August 14, 2025
HomeKarnatakaಗಡಿ ಪಾರಾದ ವಕೀಲ ನೇಮಕಾತಿ ವಿವಾದ–ವಿಧಾನಸಭೆಯಲ್ಲಿ ತೀವ್ರ ಚರ್ಚೆ

ಗಡಿ ಪಾರಾದ ವಕೀಲ ನೇಮಕಾತಿ ವಿವಾದ–ವಿಧಾನಸಭೆಯಲ್ಲಿ ತೀವ್ರ ಚರ್ಚೆ

- Advertisement -
- Advertisement -

Bengaluru: ವಿಧಾನಸಭೆಯಲ್ಲಿ ಕಾನೂನು ಸಚಿವ ಎಚ್. ಕೆ. ಪಾಟೀಲ್ ಗಡಿ ಪಾರಾದ ವಕೀಲರಿಗೆ ವಕಾಲತ್ತು ಮಾಡಲಾಗುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರು ಹೇಳಿದ್ದಾರೆ, “ಇವರ ಪೊಲೀಸ್ ರೆಕಾರ್ಡ್ಸ್ ಸರ್ಕಾರ ಪರಿಶೀಲಿಸಿಲ್ಲ.”

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು, “ವಿಜಯಪುರಕ್ಕೆ ಸರ್ಕಾರಿ ಅಭಿಯೋಜಕರಾಗಿ ಸೈಯದ್ ಬಾಷಾ ಖಾದ್ರಿ ನೇಮಕ ಮಾಡಲಾಗಿದೆ. ಇವರು ಕ್ರಿಮಿನಲ್, ಕೊಲೆಗಡುಕ. ಇಂತಹ ವ್ಯಕ್ತಿಯನ್ನು ಸರ್ಕಾರ ನೇಮಕ ಮಾಡಿದೆ. ತಕ್ಷಣ ವಜಾ ಮಾಡಬೇಕು.”

ಸಚಿವ ಎಚ್. ಕೆ. ಪಾಟೀಲ್ ಹೇಳಿದರು, “ಇವರಿಗೆ ಒಂದು ವರ್ಷದ ನೇಮಕ ಮಾಡಲಾಗಿದೆ. ಗಡೀಪಾರಾದ ವಕೀಲ ಕೋರ್ಟ್‌ನಲ್ಲಿ ವಕಾಲತ್ತು ಮಾಡಲು ಸಾಧ್ಯವಿಲ್ಲ. ಪೊಲೀಸ್ ದಾಖಲೆ ಪರಿಶೀಲನೆ ಮಾಡಿಲ್ಲ.”

ಯತ್ನಾಳ್ ಮುನ್ಸೂಚನೆ ನೀಡಿದರು, “ಸೈಯದ್ ಬಾಷಾ ಖಾದ್ರಿಯನ್ನು ವಜಾ ಮಾಡದಿದ್ದರೆ, ಧರಣಿ ಕೂತೇವೆ.” ಸಚಿವ ಭರವಸೆ ನೀಡಿದರು, “ಸರ್ಕಾರದ ಹಂತದಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ.”

ಸಚಿವ ಸ್ಪಷ್ಟನೆ ನೀಡದ ಕಾರಣ, ಯತ್ನಾಳ್ ಸದನದಲ್ಲಿ ಧರಣಿ ಆರಂಭಿಸಿದರು. ಸ್ಪೀಕರ್ ಉತ್ತರ ಕೊಡಿಸುವ ಭರವಸೆ ನೀಡಿದ ನಂತರ, ಯತ್ನಾಳ್ ಧರಣಿ ವಾಪಸ್ ಪಡೆದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page