Home Karnataka Chinnaswamy Stampede Case: ಆಯೋಜಕರ ನಿರ್ಲಕ್ಷ್ಯ, ಸರ್ಕಾರದ ಕ್ರಮಗಳು ಮತ್ತು ವಿರೋಧ ಪಕ್ಷದ ಟೀಕೆ

Chinnaswamy Stampede Case: ಆಯೋಜಕರ ನಿರ್ಲಕ್ಷ್ಯ, ಸರ್ಕಾರದ ಕ್ರಮಗಳು ಮತ್ತು ವಿರೋಧ ಪಕ್ಷದ ಟೀಕೆ

Chinnaswamy stampede case

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತಕ್ಕೆ ಆಯೋಜಕರೇ ಹೆಚ್ಚು ಹೊಣೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ಇದು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ದೊಡ್ಡ ದುರಂತ.

ಐಪಿಎಲ್ ಕ್ರೀಡೆಗೆಂದೇ ಅಲ್ಲ, ಹಣದ ದೃಷ್ಟಿಯಿಂದ ಹೆಚ್ಚು ನಡೆಯುತ್ತಿದೆ. ಸುಮಾರು 15 ಬಿಲಿಯನ್ ಡಾಲರ್ ಆದಾಯ ಬರುತ್ತಿದೆ, ಆದರೆ ಕ್ರೀಡೆ ತನ್ನ ಮೂಲ ಅರ್ಥ ಕಳೆದುಕೊಂಡಿದೆ ಎಂದು ಟೀಕೆ.

ಪ್ರಕರಣದ ಮೇಲೆ ಕೈಗೊಂಡ ಕ್ರಮಗಳು

  • ಆರ್ಸಿಬಿ, ಕೆಎಸ್ಸಿಎ, ಡಿಎನ್ಎ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
  • ಪೊಲೀಸ್ ಅಧಿಕಾರಿಗಳ ಮೇಲೂ ಕ್ರಮ: ಕೆಲವರನ್ನು ಅಮಾನತು ಮಾಡಲಾಗಿದೆ.
  • ಸಿಎಂ ರಾಜಕೀಯ ಸಲಹೆಗಾರ ಗೋವಿಂದರಾಜ್ ಕೂಡ ಅಮಾನತು.
  • ಸಾವಿಗೀಡಾದವರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಮತ್ತು ಗಾಯಾಳುಗಳ ಚಿಕಿತ್ಸೆ ವೆಚ್ಚ ಸರ್ಕಾರದಿಂದಲೇ.
  • ಗುಪ್ತಚರ ಇಲಾಖೆಯ ಮುಖ್ಯಸ್ಥರ ವರ್ಗಾವಣೆ.

ದೇಶದ ಬೇರೆ ಕಡೆ ನಡೆದಿದ್ದಂತಹ ಘಟನೆಗಳು

  • 2016: ತಿರುವಣ್ಣಾಮಲೈ ದೇವಸ್ಥಾನ ಕಾಲ್ತುಳಿತ.
  • ಒಡಿಶಾ ಪುರಿ, ಇಂದೋರ್ ರಾಮನವಮಿ, ತಿರುಮಲ ಬೆಟ್ಟ, ಮಹಾಕುಂಭ ಮೇಳಗಳಲ್ಲಿ ಹಲವು ಸಾವಿನ ಘಟನೆಗಳು.
  • ಕರ್ನಾಟಕದಲ್ಲೂ ರಾಜಕುಮಾರ್ ನಿಧನ ಸಮಯದಲ್ಲಿ ಕಾಲ್ತುಳಿತ.

ಹೊಸ ಸ್ಟೇಡಿಯಂ ಯೋಜನೆ

  • ಚಿನ್ನಸ್ವಾಮಿ ಸ್ಟೇಡಿಯಂ ಸಾಮರ್ಥ್ಯ 33 ಸಾವಿರ ಮಾತ್ರ.
  • ಅಗತ್ಯಕ್ಕೆ ತಕ್ಕಂತೆ ತುಮಕೂರಿನಲ್ಲಿ ಹೊಸ ಸ್ಟೇಡಿಯಂ ನಿರ್ಮಾಣ ಪ್ರಗತಿಯಲ್ಲಿ.
  • ದೇವನಹಳ್ಳಿಯಲ್ಲಿ ಸ್ಪೋರ್ಟ್ಸ್ ಸಿಟಿ ಯೋಜನೆಯೂ ಇದೆ.

ಸರ್ಕಾರದ ಮುಂದಿನ ನಿರ್ಧಾರ

  • ಕ್ರೀಡಾ ಸಂಸ್ಥೆಗಳ ಆಡಳಿತ ಮತ್ತು ಹಣಕಾಸು ವ್ಯವಹಾರಗಳ ಮೇಲೆ ಹೊಸ ನಿಯಮ ಮತ್ತು ವಿಧೇಯಕ ತರಲು ಸರ್ಕಾರ ಮುಂದಾಗಿದೆ.
  • ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ.

ವಿರೋಧ ಪಕ್ಷದ ಟೀಕೆ

  • ಆರ್. ಅಶೋಕ್: “ತಪ್ಪು ಮಾಡಿದವರು ಸಿಎಂ, ಡಿಸಿಎಂ; ಆದರೆ ಹೊಣೆ ಹೊತ್ತಿರುವುದು ಪರಮೇಶ್ವರ್ ಮಾತ್ರ” ಎಂದು ಟೀಕೆ.
  • ಸರ್ಕಾರವು ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹ.
  • “ಅನುಮತಿ ಯಾರು ಕೊಟ್ಟರು?” ಎಂಬ ಪ್ರಶ್ನೆ ಎತ್ತಿದರು.

ಡಿಕೆಶಿಯ ಪ್ರತಿಕ್ರಿಯೆ

  • “ನಾನೇ ಬಾವುಟ ಹಿಡಿದು, ಕಪ್‌ಗೆ ಮುತ್ತು ಕೊಟ್ಟೆ. ನಾನು ಕ್ರಿಕೆಟ್ ಅಭಿಮಾನಿ” ಎಂದು ಸ್ಪಷ್ಟನೆ.
  • ತನ್ನ ಆರ್ಎಸ್ಎಸ್ ಹಿನ್ನಲೆ ನೆನಪಿಸಿಕೊಂಡು ಪ್ರಾರ್ಥನಾ ಗೀತೆ ಹಾಡಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version