back to top
22.6 C
Bengaluru
Wednesday, June 18, 2025
HomeKarnatakaBJP ನಾಯಕರಿಗೆ CM Siddaramaiah ಸಂದೇಶ: ಆತ್ಮಸಾಕ್ಷಿಯಿಂದ ನಡೆದುಕೊಳ್ಳಿ, ಪ್ರದರ್ಶನ ಬೇಡ

BJP ನಾಯಕರಿಗೆ CM Siddaramaiah ಸಂದೇಶ: ಆತ್ಮಸಾಕ್ಷಿಯಿಂದ ನಡೆದುಕೊಳ್ಳಿ, ಪ್ರದರ್ಶನ ಬೇಡ

- Advertisement -
- Advertisement -

Bengaluru: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕರು ನಮ್ಮ ರಾಜೀನಾಮೆ ಕೇಳುವ ಮೊದಲು ತಮ್ಮದೇ ಪಕ್ಷದ ಆಡಳಿತದಲ್ಲಿ ನಡೆದ ಘಟನೆಗಳಲ್ಲಿ ರಾಜೀನಾಮೆ ನೀಡಿದ್ದವರ ಪಟ್ಟಿಯನ್ನು ಪ್ರಕಟಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸವಾಲು ಹಾಕಿದ್ದಾರೆ.

ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಈ ಘಟನೆ ದುರಂತವಾದರೂ, ನಾವು ಜವಾಬ್ದಾರಿಯನ್ನು ಹೊತ್ತಿದ್ದೇವೆ. ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ, ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ವರ್ಗಾಯಿಸಿದ್ದೇವೆ, ನನ್ನ ರಾಜಕೀಯ ಕಾರ್ಯದರ್ಶಿಯನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದೇನೆ. ಜಾನ್ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖಾ ಆಯೋಗ ರಚಿಸಲಾಗಿದೆ,” ಎಂದು ಹೇಳಿದರು.

ಅಷ್ಟು ಕ್ರಮಕೈಗೊಂಡ ನಂತರವೂ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆ ಜನಕಾಳಜಿಯಿಂದಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು ಸ್ಪಷ್ಟ. “ಬಿಜೆಪಿ, ಮೃತದೇಹಗಳ ಮೇಲೆ ರಾಜಕಾರಣ ಮಾಡುವುದು ಅವರ ಚಟ. ಅವರಿಗೆ ಜನರ ನೋವಿಗಿಂತ ರಾಜಕೀಯ ಹೆಚ್ಚಾಗಿ ಮುಖ್ಯ,” ಎಂದು ಸಿದ್ದರಾಮಯ್ಯ ಹರಿಹಾಯ್ದರು.

“ಪ್ರತಿ ಸಾವು ಹಿಂದೆ ಇರುವ ನೋವಿಗೆ ನಾವು ಸ್ಪಂದಿಸುತ್ತೇವೆ. ಆದ್ದರಿಂದ ನಾವು ಇಂತಹ ಘಟನೆಗಳನ್ನು ರಾಜಕೀಯ ಸಾಧನೆಯಾಗಿ ಬಳಸಿಲ್ಲ,” ಎಂದ ಅವರು, “ಆದರೆ ಬಿಜೆಪಿ ಮತ್ತೆ ಮತ್ತೆ ಈ ವಿಷಯಗಳನ್ನೆತ್ತಿ ಜನರನ್ನು ಪ್ರಚೋದಿಸುತ್ತಿದೆ. ಅಂಥ ನಡವಳಿಕೆಗೆ ಉತ್ತರವಾಗಿ ನಾವು ಅವರ ಆಡಳಿತದ ವೈಫಲ್ಯಗಳನ್ನು ಜನತೆಗೆ ಗೊತ್ತಾಗಿಸಲು ಹೊರಟಿದ್ದೇವೆ,” ಎಂದು ತಿಳಿಸಿದರು.

2002ರ ಗುಜರಾತ್ ಹತ್ಯಾಕಾಂಡದ ವೇಳೆ ಸುಮಾರು 2000 ಮಂದಿ ಸಾವಿಗೀಡಾದರೂ ಕೂಡಾ ಮೋದಿ ರಾಜೀನಾಮೆ ನೀಡಿಲ್ಲವಲ್ಲಾ? ಅವರದೇ ಪಕ್ಷದ ವಾಜಪೇಯಿ ಒತ್ತಾಯಿಸಿದ್ದರೂ ಕೂಡ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಹೀಗಿರುವಾಗ ಈಗ ಅವರ ಪಕ್ಷದವರು ನಮ್ಮ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಎತ್ತಿಹಿಡಿದರು.

ಪಹಲ್ಗಾಮ್ ಉಗ್ರ ದಾಳಿ, ಮಣಿಪುರ ಹಿಂಸೆ, ಮೋರ್ಬಿ ಸೇತುವೆ ಕುಸಿತ, ಮಹಾಕುಂಭ ಮೇಳ ದುರಂತ – ಎಲ್ಲವೂ ಬಿಜೆಪಿ ಆಡಳಿತದಲ್ಲಿ ನಡೆದಿದೆ. ಆದರೆ ಯಾವುದೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿಲ್ಲ, ಸರಿಯಾದ ತನಿಖೆಯೂ ನಡೆಸಿಲ್ಲ. ಇವು ಬಿಜೆಪಿಯ ನೈತಿಕತೆ ಪ್ರಶ್ನಿಸುವಂತಹ ಉದಾಹರಣೆಗಳು ಎಂದು ಅವರು ಹೇಳಿದರು.

“ನಮ್ಮ ಸರ್ಕಾರ 7 ಕೋಟಿ ಜನರ ಪಾಲಿಗೆ ಜವಾಬ್ದಾರಿ ವಹಿಸಿದೆ. ಸಮಯಕ್ಕೆ ತಕ್ಕ ಕ್ರಮಗಳನ್ನು ಕೈಗೊಂಡಿದ್ದೇವೆ. ನ್ಯಾಯಾಧೀಶ ನೇತೃತ್ವದ ತನಿಖೆಯ ವರದಿ ಆಧರಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗ ಬಿಜೆಪಿ ನಾಯಕರು ಬೀದಿ ನಾಟಕವಿಲ್ಲದೆ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಲಿ,” ಎಂದು ಸಿಎಂ ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page