back to top
25.2 C
Bengaluru
Wednesday, October 8, 2025
HomeHealthಕರ್ನಾಟಕದಲ್ಲಿ Corona ಹೆಚ್ಚಳ: Health Department ನಿಂದ ಶಾಲೆಗಳಿಗೆ ಮಾರ್ಗಸೂಚಿ

ಕರ್ನಾಟಕದಲ್ಲಿ Corona ಹೆಚ್ಚಳ: Health Department ನಿಂದ ಶಾಲೆಗಳಿಗೆ ಮಾರ್ಗಸೂಚಿ

- Advertisement -
- Advertisement -

Bengaluru: Corona ವೈರಾಣು ಹೊಸ ರೂಪವಾದ ಒಮಿಕ್ರಾನ್ ಕಾರಣವಾಗಿ ಜಗತ್ತಿನಲ್ಲಿ ಆತಂಕವಿದೆ. ಈಗ ಕರ್ನಾಟಕದಲ್ಲಿ ಕೂಡ Corona ಸಕ್ರಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೇ ಸಮಯದಲ್ಲಿ ಶಾಲೆಗಳು ಮತ್ತೆ ತೆರೆದಿದ್ದು, ಆರೋಗ್ಯ ಇಲಾಖೆ ಶಾಲೆಗಳಿಗೆ ಮುಂಜಾಗ್ರತಾ ಮಾರ್ಗಸೂಚಿ ನೀಡಿದೆ.

ಬೇಸಿಗೆ ರಜೆ ಮುಗಿದು ವಿದ್ಯಾರ್ಥಿಗಳು ಶಾಲೆಗೆ ಹಿಂತಿರುಗಿದ್ದಾರೆ. ಆದರೆ ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರಿಂದ ಸಿಎಂ ಸಿದ್ದರಾಮಯ್ಯ ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಇದ್ದರೆ ರಜೆ ಕೊಡಬೇಕೆಂದು ಹೇಳಿದ್ದಾರೆ. ಆಧಾರವಾಗಿ ಆರೋಗ್ಯ ಇಲಾಖೆಯು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಹೊಸ ಗೈಡ್ಲೈನ್ಸ್ ಹೊರಡಿಸಿದೆ.

ಆರೋಗ್ಯ ಇಲಾಖೆ ಸೂಚನೆಗಳು

  • ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದರೆ ಶಾಲೆಗೆ ಕಳುಹಿಸಬಾರದು.
  • ಮಕ್ಕಳನ್ನು ಸಂಪೂರ್ಣ ಗುಣಮುಖರಾದ ಮೇಲೆ ಮಾತ್ರ ಶಾಲೆಗೆ ಕಳುಹಿಸಬೇಕು.
  • ಶಾಲೆಯಲ್ಲಿ ಯಾವುದೇ ಗುಣಲಕ್ಷಣಗಳು ಕಂಡುಬಂದರೆ ತಕ್ಷಣ ಪೋಷಕರಿಗೆ ತಿಳಿಸಿ ಮಕ್ಕಳನ್ನು ಮನೆಗೆ ಕಳುಹಿಸಬೇಕು.
  • ಶಾಲಾ ಸಿಬ್ಬಂದಿಗೆ ಕೂಡ ಕೊರೋನಾ ಲಕ್ಷಣಗಳಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.
  • ಶಾಲೆಗಳಲ್ಲಿ ಸ್ವಚ್ಛತೆ ಮತ್ತು ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕುಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ 234 ಸಕ್ರಿಯ ಪ್ರಕರಣಗಳಿರುವಲ್ಲಿ 150ಕ್ಕೂ ಹೆಚ್ಚು ಕೇಸ್ ಬೆಂಗಳೂರಲ್ಲಿ ವರದಿಯಾಗಿವೆ. ಮಳೆಗಾಲದ ಕಾರಣ ಡೆಂಗ್ಯೂ ರೋಗದ ಜಾಗ್ರತೆಯೂ ಅಗತ್ಯವಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಸೂಚನೆ ನೀಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page