back to top
27.8 C
Bengaluru
Monday, June 2, 2025
HomeHealthಮತ್ತೆ ಹರಡುತ್ತಿದೆ Corona: Bengaluru ನಲ್ಲಿ ಎಚ್ಚರಿಕೆ ಅಗತ್ಯ

ಮತ್ತೆ ಹರಡುತ್ತಿದೆ Corona: Bengaluru ನಲ್ಲಿ ಎಚ್ಚರಿಕೆ ಅಗತ್ಯ

- Advertisement -
- Advertisement -

Bengaluru: 2020 ರಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಮತ್ತೆ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಲು ಆರಂಭಿಸಿದೆ. ಓಮಿಕ್ರಾನ್ ಪ್ರಭೇದದ ಜೆಎನ್.1 ಉಪ ತಳಿ ವೈರಸ್ ಕಾರಣವಾಗಿ ಸೋಂಕುಗಳು ಹೆಚ್ಚುತ್ತಿವೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ.

ಈ ನಡುವೆ ರಾಜ್ಯದಲ್ಲಿ ಕಂಡುಬರುತ್ತಿರುವ ಹೊಸ ಪ್ರಕರಣಗಳಲ್ಲಿ ಸುಮಾರು 75% ಕ್ಕಿಂತ ಹೆಚ್ಚಿನವು ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ 171 ಕ್ಕಿಂತ ಹೆಚ್ಚಿನ ಪ್ರಕರಣಗಳು ದೃಢಪಟ್ಟಿದ್ದು, ಪ್ರತಿದಿನವೂ ಸುಮಾರು 36 ಹೊಸ ಪ್ರಕರಣಗಳು ಬೆಳೆಯುತ್ತಿವೆ. ಇದರಲ್ಲಿ ಪ್ರತಿ ದಿನ ಸುಮಾರು 25 ಪ್ರಕರಣಗಳು ಬೆಂಗಳೂರಿನಿಂದ ಬಂದಿವೆ.

ತಜ್ಞ ವೈದ್ಯರು, ವಿಶೇಷವಾಗಿ ಗರ್ಭಿಣಿಯರು, ಮಕ್ಕಳು, ಉಸಿರಾಟದ ಸಮಸ್ಯೆಯಿರುವವರು ಮತ್ತು ವೃದ್ಧರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಫಿವರ್ ಕ್ಲಿನಿಕ್ ಆರಂಭಿಸಲಾಗಿದೆ. ಶೀತ, ಕೆಮ್ಮು, ಜ್ವರ ಮತ್ತು ಮೈ ನೋವಿರುವವರಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದೆ.

ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್‌ ಮೂಲಕ ಸೋಂಕಿನ ತುರ್ತು ಪರಿಸ್ಥಿತಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮತ್ತೆ ಕೋವಿಡ್ ಆತಂಕ ತಲೆೆತ್ತುತ್ತಿರುವ ಈ ಸಮಯದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ.

ಕೊರೊನಾ ಮತ್ತೆ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ. ಜನತೆ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು. ಸಾನಿಟೈಜರ್ ಬಳಕೆ, ಮಾಸ್ಕ್ ಧರಿಸುವುದು, ಹಾಗೂ ಸಾರ್ವಜನಿಕ ಜಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇನ್ನೂ ಅಗತ್ಯವಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page