back to top
23.2 C
Bengaluru
Thursday, February 26, 2026
HomeKarnatakaBengaluru UrbanD. K. Shivakumar: ಸ್ವಾಮೀಜಿಗಳಿಗೆ ರಾಜಕಾರಣದಿಂದ ದೂರ ಇರಲು ಸಲಹೆ

D. K. Shivakumar: ಸ್ವಾಮೀಜಿಗಳಿಗೆ ರಾಜಕಾರಣದಿಂದ ದೂರ ಇರಲು ಸಲಹೆ

- Advertisement -
- Advertisement -

Bengaluru : “ಸ್ವಾಮೀಜಿಗಳು ರಾಜಕಾರಣದಿಂದ ದೂರ ಇರಬೇಕು. ಅವರು ದೇಶದಲ್ಲಿ ಅಶಾಂತಿ ಹುಟ್ಟುಹಾಕುವಂತಾದ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಮನವಿ ಮಾಡಿದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರ ಶೇಖರ ಸ್ವಾಮೀಜಿ, ಮುಸ್ಲಿಮರಿಗೆ ನೀಡಿರುವ ಮತದಾನ ಹಕ್ಕನ್ನು ಹಿಂಪಡೆಯಬೇಕೆಂದು ಹೇಳಿದ ಹಿನ್ನೆಲೆ, ಶಿವಕುಮಾರ್ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದರು. “ಸ್ವಾಮೀಜಿಗಳು ಧಾರ್ಮಿಕ ವಿಚಾರಗಳಲ್ಲೇ ತೊಡಗಿಸಿಕೊಳ್ಳಬೇಕು. ಅವರು ಶಾಂತಿಯುತ ಸಮಾಜ ನಿರ್ಮಿಸಲು ಪ್ರಯತ್ನಿಸಬೇಕು, ರಾಜಕಾರಣದಿಂದ ದೂರ ಉಳಿಯಲು ಉತ್ತಮ,” ಎಂದರು.

ಚಂದ್ರಶೇಖರ ಸ್ವಾಮೀಜಿ “ಮುಸ್ಲಿಮರಿಗೆ ಮತದಾನ ಹಕ್ಕು ನೀಡಬಾರದು” ಮತ್ತು “ವಕ್ಫ್ ಮಂಡಳಿ ಅಥವಾ ವಕ್ಫ್ ವ್ಯವಸ್ಥೆ ಇಲ್ಲದಂತೆ ಮಾಡಬೇಕು” ಎಂದು ಅಭಿಪ್ರಾಯಪಟ್ಟಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page