back to top
25.5 C
Bengaluru
Tuesday, July 22, 2025
HomeNewsParalympic Championಗೆ ಹಣ ನೀಡಲು ವಿಳಂಬ: ಅಧಿಕಾರಿಗಳಿಗೆ High Court 2 ಲಕ್ಷ ದಂಡ

Paralympic Championಗೆ ಹಣ ನೀಡಲು ವಿಳಂಬ: ಅಧಿಕಾರಿಗಳಿಗೆ High Court 2 ಲಕ್ಷ ದಂಡ

- Advertisement -
- Advertisement -

Bengaluru: ಎರಡು ಕೈ ಕಳೆದುಕೊಂಡರೂ ದೇಶಮಟ್ಟದ ಪ್ಯಾರಾಲಿಂಪಿಕ್ (Paralympic champion) ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದ ಕೆ.ಎಸ್. ವಿಶ್ವಾಸ್ ಎಂಬ ಯುವಕನಿಗೆ ಸರ್ಕಾರ ನೀಡಬೇಕಾದ ಬಹುಮಾನ ಹಣ ಪಾವತಿಗೆ ವಿಳಂಬ ಮಾಡಿದ್ದಕ್ಕೆ, ಕರ್ನಾಟಕ ಹೈಕೋರ್ಟ್ ರಾಜ್ಯದ ಅಧಿಕಾರಿಗಳಿಗೆ ₹2 ಲಕ್ಷ ದಂಡ ಹಾಕಿದೆ.

ಅರ್ಜಿದಾರರಾಗಿದ್ದ 34 ವರ್ಷದ ವಿಶ್ವಾಸ್ ಅವರು, ತಮ್ಮ 6 ಲಕ್ಷ ರೂ. ಬಹುಮಾನದಲ್ಲಿ ಬಾಕಿ ಉಳಿದ 1.26 ಲಕ್ಷ ರೂ.ಗಳನ್ನು ಪಡೆಯಲು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಪೀಠ, ಈ ದಂಡವನ್ನು ಅರ್ಜಿದಾರರಿಗೆ ದಾವೆಯ ಖರ್ಚಾಗಿ ಎರಡೂ ವಾರಗಳೊಳಗೆ ಪಾವತಿಸಬೇಕೆಂದು ತಿಳಿಸಿದೆ.

ಹೈಕೋರ್ಟ್ ಹೇಳಿದ್ದು ಹೀಗೆ: “ವಿಶ್ವಾಸ್ ಅವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಗೆಲುವು ಸಾಧಿಸಿದ್ದಾರೆ. ಅಂತಹ ಪ್ರತಿಭೆಯನ್ನು ಸರ್ಕಾರ ಬೆಂಬಲಿಸಬೇಕಾದರೆ, ಇಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದು ನ್ಯಾಯದ ಮೌಲ್ಯಕ್ಕೆ ಧಕ್ಕೆಯಾಗುತ್ತದೆ.”

ವಿಶ್ವಾಸ್ ಅವರು 2016 ರಿಂದ 2018ರ ವರೆಗೆ ಹಲವಾರು ಕ್ರೀಡಾಕೂಟಗಳಲ್ಲಿ ಪದಕ ಗೆದ್ದಿದ್ದು ಖಚಿತವಾಗಿದೆ. ಆದರೆ, ಸರ್ಕಾರದುಘೋಷಿಸಿದ ₹6 ಲಕ್ಷ ಬಹುಮಾನದಲ್ಲಿ ಇನ್ನೂ ₹1.26 ಲಕ್ಷ ಪಾವತಿಯಾಗಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಬಂಧಿತ ಅಧಿಕಾರಿಗಳು ಈ ಬಾಕಿಯನ್ನು ಖುದ್ದಾಗಿ ಪಾವತಿಸಬೇಕು. ಜತೆಗೆ, ಎರಡು ವಾರಗಳೊಳಗೆ ಈ ಮೊತ್ತ ಪಾವತಿಸದಿದ್ದರೆ, ದಿನಕ್ಕೆ ₹1000 ಹೆಚ್ಚುವರಿ ದಂಡವನ್ನೂ ಕಟ್ಟಬೇಕಾಗುತ್ತದೆ ಎಂದು ಹೈಕೋರ್ಟ್ ತೀರ್ಮಾನಿಸಿದೆ.

ಕೆ.ಎಸ್. ವಿಶ್ವಾಸ್ ಅವರು 10ನೇ ವಯಸ್ಸಿನಲ್ಲಿ ನಡೆದ ದುರಂತದಲ್ಲಿ ಎರಡು ಕೈಗಳನ್ನು ಕಳೆದುಕೊಂಡರು. ಆದರೂ ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಗೆದ್ದರು. ಸರ್ಕಾರ ಈ ಸಾಧನೆಗಾಗಿ ₹6 ಲಕ್ಷ ಬಹುಮಾನ ಘೋಷಿಸಿದ್ದರೂ, ಹಣ ಪೂರ್ತಿಯಾಗಿ ಪಾವತಿಸಲು ಅಧಿಕಾರಿಗಳು ವಿಳಂಬ ಮಾಡಿದ್ದರು. ಈ ಕಾರಣದಿಂದ ವಿಶ್ವಾಸ್ ಅವರು ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page