back to top
22.8 C
Bengaluru
Thursday, April 24, 2025
HomeDevanahalliVijayapura | Devanahalli9ನೇ ಶತಮಾನದ ತುರುಗೋಳ್ ಶಾಸನ ಪತ್ತೆ

9ನೇ ಶತಮಾನದ ತುರುಗೋಳ್ ಶಾಸನ ಪತ್ತೆ

- Advertisement -
- Advertisement -

Vijayapura, Devanahalli : ವಿಜಯಪುರ ಪಟ್ಟಣದ ಯಲುವಹಳ್ಳಿ ರಸ್ತೆಯ ಮುನೇಶ್ವರ ದೇವಾಲಯದ ಸಮೀಪದಲ್ಲಿ 9ನೇ ಶತಮಾನದ ತುರುಗೋಳ್ ಶಾಸನವೊಂದು ಪತ್ತೆಯಾಗಿದೆ. ಶನಿವಾರ ಇತಿಹಾಸ ತಜ್ಞರು ಶಾಸನದ ವಿಷಯವನ್ನು ಪರಿಶೀಲಿಸಿ, ಅಲ್ಲಿ ಬರೆದ ಮಾಹಿತಿಯನ್ನು ಸಂಗ್ರಹಿಸಿದರು.

ಶಾಸನವು ಹಳಗನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, 9ನೇ ಶತಮಾನದಲ್ಲಿ ಶತ್ರುಗಳೊಂದಿಗೆ ಯುದ್ಧ ನಡೆಸಿ ಗೋವುಗಳನ್ನು ರಕ್ಷಿಸಿದ ವೀರನಿಗೆ ಗದ್ದೆಯನ್ನು ದಾನವಾಗಿ ನೀಡಿದ ಕುರಿತು ಉಲ್ಲೇಖಿಸುತ್ತದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸಂಸ್ಥಾಪಕ ಸದಸ್ಯ ಪಿ.ವಿ. ಕೃಷ್ಣಮೂರ್ತಿ ವಿವರಿಸಿದರು.

ಇತಿಹಾಸ ತಜ್ಞ ಪ್ರೊ. ಕೆ.ಆರ್. ನರಸಿಂಹನ್ ಅವರು, “ಶಾಸನಗಳು ಮತ್ತು ವೀರಗಲ್ಲುಗಳು ಇತಿಹಾಸ ತಿಳಿಯಲು ಮಹತ್ವದ ಆಧಾರವಾಗುತ್ತವೆ. ಇವುಗಳನ್ನು ಪುರಾವೆಗಳಾಗಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇವು ಮುಂದಿನ ಪೀಳಿಗೆಗೆ ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಅರಿಯಲು ನೆರವಾಗುತ್ತವೆ” ಎಂದು ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿಯ ಕಮಿಟಿ ಸದಸ್ಯರಾದ ಕೆ. ಧನಪಾಲ್ ಮತ್ತು ಸುದರ್ಶನ್ ಈ ವೇಳೆ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page