Home Karnataka Dharmasthala case: Supreme Court ನಲ್ಲಿ ಅರ್ಜಿ ವಿಚಾರಣೆ ನಿರಾಕರಣೆ

Dharmasthala case: Supreme Court ನಲ್ಲಿ ಅರ್ಜಿ ವಿಚಾರಣೆ ನಿರಾಕರಣೆ

Supreme Court

Bengaluru/Delhi: ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಮತ್ತು ಧರ್ಮಾಧಿಕಾರಿಗಳ ಕುಟುಂಬದವರ ವಿರುದ್ಧ (Dharmasthala case) ಮಾಧ್ಯಮಗಳಲ್ಲಿ ಸುದ್ದಿಯನ್ನು ಪ್ರಸಾರ ಮಾಡದಂತೆ ನೀಡಲಾಗಿದ್ದ ನ್ಯಾಯಾಲಯದ ತಾತ್ಕಾಲಿಕ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿಯವರ ನ್ಯಾಯಪೀಠ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿದೆ. ಆದರೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಸೂಚನೆ ನೀಡಿದೆ.

1995ರಿಂದ 2014ರ ನಡುವೆ ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಹೇರಲಾಗಿದ್ದು, ಈ ಕುರಿತು ಸ್ವಚ್ಛತಾ ಕಾರ್ಮಿಕನೊಬ್ಬನು ದೂರು ನೀಡಿದ್ದಾನೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಪ್ರಕರಣದ ನಂತರ ಧರ್ಮಾಧಿಕಾರಿಗಳ ಕುಟುಂಬದವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬೆಂಗಳೂರು ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ, ಯಾವುದೇ ಮಾನಹಾನಿಕರ ಅಥವಾ ಆಧಾರರಹಿತ ಸುದ್ದಿ ಪ್ರಸಾರ ಅಥವಾ ಹಂಚಿಕೆಗೆ ತಡೆ ನೀಡುವಂತೆ ಆದೇಶಿಸಿತ್ತು. ಜೊತೆಗೆ, ಇತ್ತೀಚೆಗೆ ಪ್ರಸಾರವಾದ ಮಾಹಿತಿಯನ್ನೂ ತೆಗೆದು ಹಾಕಬೇಕೆಂದು ಸೂಚನೆ ನೀಡಿತ್ತು.

ತಾನಾಗಿಯೇ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (SIT) ರಚನೆ ಮಾಡಿದೆ. ನ್ಯಾಯಾಲಯದ ತಡೆಯಾದೇಶ ತನಿಖೆಗೆ ತೊಂದರೆ ಉಂಟುಮಾಡಬಹುದು ಹಾಗೂ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಿದೆ ಎಂದು ಥರ್ಡ್ ಐ ಚಾನೆಲ್ ಹೇಳಿದೆ.

ಮಾಧ್ಯಮದ ಮೇಲೆ ತಡೆ ವಿಧಿಸಿದ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ, ಅದನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ಮುಂದಿನ ಹಂತದಲ್ಲಿ ವಿಚಾರಣೆ ಸಾಧ್ಯವಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version