back to top
25.4 C
Bengaluru
Thursday, February 5, 2026
HomeNewsಮಾಜಿ ಶಾಸಕರಿಗೆ Digital Arrest-ವಂಚಕರ ಹೊಸ ತಂತ್ರ

ಮಾಜಿ ಶಾಸಕರಿಗೆ Digital Arrest-ವಂಚಕರ ಹೊಸ ತಂತ್ರ

- Advertisement -
- Advertisement -

Bengaluru: ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇತ್ತೀಚೆಗೆ ಮಾಜಿ ಶಾಸಕರೊಬ್ಬರು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ 30 ಲಕ್ಷ ರೂ ಕಳೆದುಕೊಂಡಿದ್ದಾರೆ.

ಆಗಸ್ಟ್ 12ರಂದು ವಂಚಕರು ಸಿಬಿಐ ಅಧಿಕಾರಿಗಳಂತೆ ಕರೆ ಮಾಡಿ, “ನೀವು ನರೇಶ್ ಗೋಯಲ್ ಮನಿ ಲಾಂಡರಿಂಗ್ ಕೇಸಿನಲ್ಲಿ ಭಾಗಿಯಾಗಿದ್ದೀರಿ. ನಿಮ್ಮ ಎಟಿಎಂ ಕಾರ್ಡ್‌ಗಳಿಂದ ವ್ಯವಹಾರ ನಡೆದಿದೆ” ಎಂದು ಹೇಳಿದರು.

“ನಿಮ್ಮ ತಪ್ಪಿಲ್ಲ ಎಂದು ದೃಢಪಡಿಸಲು 30 ಲಕ್ಷ ರೂ. ಡೆಪಾಸಿಟ್ ಮಾಡಿ. ಆನ್‌ಲೈನ್‌ನಲ್ಲಿ ಜಡ್ಜ್ ಮುಂದೆ ವಿಚಾರಣೆ ನಡೆಸಲಾಗುತ್ತದೆ. ನಂತರ ಹಣ ಹಿಂದಿರುಗಿಸಲಾಗುತ್ತದೆ” ಎಂದು ನಂಬಿಸಿ ಹಣ ಪಡೆದುಕೊಂಡರು.

ವಂಚನೆ ಅರಿತ ಮಾಜಿ ಶಾಸಕ ತಕ್ಷಣ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳವರೆಗೂ ಈ ರೀತಿಯ ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page