Beijing: ಇತ್ತೀಚೆಗೆ ಭಾರತ-ಚೀನಾ (China) ಸಂಬಂಧಗಳಲ್ಲಿ ಒತ್ತಡ ಹೆಚ್ಚಾಗಿದೆ. ನೇಪಾಳದಲ್ಲಿರುವ ಚೀನಾ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಭಾರತ-ನೇಪಾಳ ಗಡಿಯ ಹತ್ತಿರ ಹೋಗಬೇಡಿ ಎಂದು ಎಚ್ಚರಿಕೆ ನೀಡಿದೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವುದರಿಂದ ಕಾನೂನು ಕಠಿಣ ಕ್ರಮಕ್ಕೆ ಒಳಗಾಗಬಹುದು ಎಂದು ತಿಳಿಸಿದ್ದಾರೆ.
ರಾಯಭಾರ ಕಚೇರಿ ಹೇಳುವಂತೆ, ಗಡಿ ಪ್ರದೇಶದಲ್ಲಿ ಗಸ್ತು ಹಾಗೂ ತಪಾಸಣೆ ಹೆಚ್ಚಿಸಲಾಗಿದೆ. ಆದರೂ ಕೆಲವು ಚೀನಾದವರು ಗಡಿಯತ್ತ ಹೋಗುತ್ತಿದ್ದಾರೆ. ಇತ್ತೀಚೆಗೆ ಭಾರತೀಯ ಗಡಿ ಭದ್ರತಾ ಪಡೆ ಕೆಲರನ್ನು ಅಕ್ರಮ ಪ್ರವೇಶ ಆರೋಪದ ಮೇಲೆ ಬಂಧಿಸಿದೆ.
ಭಾರತ-ನೇಪಾಳ ಗಡಿ ‘ಮುಕ್ತ ಗಡಿ’ ಆದರೆ ವಿದೇಶಿಗರಿಗೆ ವೀಸಾ ಇಲ್ಲದೆ ಪ್ರವೇಶಿಸಲು ಅವಕಾಶವಿಲ್ಲ. ತಪ್ಪಾಗಿ ಗಡಿ ದಾಟಿದರೆ ಕಾನೂನಿನ ಬಲವಂತಕ್ಕೆ ಒಳಗಾಗಬಹುದು. ಚೀನಾದ ಕಠಿಣ ಕಾನೂನು ಪ್ರಕಾರ, 2ರಿಂದ 8 ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಬಹುದು.
ಯಾವುದೇ ತುರ್ತು ಪರಿಸ್ಥಿತಿ ಇದ್ದರೆ, ನೇಪಾಳದಲ್ಲಿರುವ ಚೀನಾ ರಾಯಭಾರ ಕಚೇರಿಯನ್ನು ತಕ್ಷಣ ಸಂಪರ್ಕಿಸುವಂತೆ ಹೇಳಲಾಗಿದೆ.