Bengaluru: ರಾಜ್ಯದ ರೈತರು ಕೃಷಿ ಕ್ಷೇತ್ರದಲ್ಲಿ (Agricultural) ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ತಂತ್ರಜ್ಞಾನದ (e-SAP Technology) ಮೂಲಕ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ.
ಇ–ಸ್ಯಾಪ್ (e-SAP) ತಂತ್ರಜ್ಞಾನ: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗ ರೂಪಿಸಿರುವ ಇ-ಸ್ಯಾಪ್ (e-Solutions Against Agriculture Pests) ತಂತ್ರಾಂಶವನ್ನು ಕೃಷಿ ಇಲಾಖೆ ಈಗ ಬಳಸುತ್ತಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳಿಗೆ ಸಂಬಂಧಿಸಿದ ಕೀಟ, ರೋಗ ಮತ್ತು ಪೋಷಕಾಂಶ ನಿರ್ವಹಣೆಗೆ ನಿಖರವಾದ ಸಲಹೆಗಳನ್ನು ನೀಡಲಾಗುತ್ತದೆ.
ಇ-ಸ್ಯಾಪ್ ತಂತ್ರಜ್ಞಾನವು ಬೆಳೆ ಆರೋಗ್ಯ ನಿರ್ವಹಣೆಗೆ ಸಂಪರ್ಕಿಸುವ ಐಸಿಟಿ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಕೀಟಗಳು, ರೋಗಗಳು ಮತ್ತು ಪೋಷಕಾಂಶ ಕೊರತೆಗಳು ಬಗ್ಗೆ ವಿವರವಾದ ಸಲಹೆಗಳನ್ನು ನೀಡಲಾಗುತ್ತದೆ. ತಜ್ಞರ ಸಂಪರ್ಕವನ್ನು ಸ್ಥಾಪಿಸಲು ಮತ್ತು ತ್ವರಿತ ನಿರ್ಧಾರ ಬೆಂಬಲಕ್ಕಾಗಿ ನೈಜ ಸಮಯದಲ್ಲಿ ವರದಿಗಳನ್ನು ನೀಡುತ್ತದೆ.
ಈ ತಂತ್ರಜ್ಞಾನವು ರೈತರಿಂದ ಸಮಸ್ಯೆಗಳನ್ನು ಅಪ್ಲೋಡ್ ಮಾಡುವ ಮೂಲಕ ತಾಂತ್ರಿಕ ಪರಿಹಾರ ನೀಡಲು ಸಹಾಯ ಮಾಡುತ್ತದೆ. ಇದರಿಂದ ಆರ್ಥಿಕ ನಷ್ಟವನ್ನು ತಡೆಯಲು ಸರ್ಕಾರ ಕ್ರಮವಹಿಸಲು ಸಿದ್ಧವಾಗಿದೆ.
ಇ-ಸ್ಯಾಪ್ ಆಪ್ ಬಳಸಲು ಕೃಷಿ ಪದವೀಧರರು, ಡಿಪ್ಲೋಮಾ ಪಡೆದವರು ಹಾಗೂ ಕೃಷಿ ಪರಿಕರ ವಿತರಕರು ಅರ್ಹತೆ ಪಡೆಯಬಹುದು. ಇದರಿಂದ ಸಣ್ಣ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.
ಈ ಆಪ್ ಸಾರ್ವಜನಿಕವಾಗಿ ಲಭ್ಯವಿಲ್ಲ, ಆದರೆ ಇಲಾಖೆಯವರು ಮತ್ತು ಕೃಷಿ ವೃತ್ತಿಗಾರರು ಮಾತ್ರ ಇದರ ಬಳಕೆ ಮಾಡುವುದಕ್ಕೆ ಅನುಮತಿ ಪಡೆಯುತ್ತಾರೆ.
ಈ ಆಪ್ 2012 ರಲ್ಲಿ ತಯಾರಿಸಲಾಗಿತ್ತು, ಆದರೆ 2017 ರಲ್ಲಿ ರಾಜ್ಯ ಸರ್ಕಾರ ಇದರ ಬಳಕೆಗೆ ನಿರ್ಧಾರ ಮಾಡಿದ್ದರೂ, ಅದು ಪ್ರಾರಂಭವಾಗಿರಲಿಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಈ ಆಪ್ ಬಳಕೆಗೆ ಪ್ರಸ್ತಾಪಿಸಿದ್ದಾರೆ.
ಇ-ಸ್ಯಾಪ್ ಆಪ್ 49 ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ, ತಾಂತ್ರಿಕ ಸಲಹೆಗಳನ್ನು ನೀಡುತ್ತದೆ. ರೈತರಿಗೆ ಕೀಟ, ರೋಗ, ಪೋಷಕಾಂಶದ ಕೊರತೆ ಹಾಗೂ ಬೇಸಾಯ ಸಂಬಂಧಿತ ಸಲಹೆಗಳನ್ನು ತಜ್ಞರಿಂದ ನೀಡಲಾಗುತ್ತದೆ.
ಇ-ಸ್ಯಾಪ್ ತಂತ್ರಜ್ಞಾನದಿಂದ ರೈತರಿಗೆ ಸಹಾಯವಾಗುತ್ತದೆ ಹಾಗೂ ಉದ್ಯೋಗ ಸೃಷ್ಟಿಗೂ ಅನುವು ಮಾಡಿಕೊಡುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.