Home Karnataka ಸಿಎಂ ಸಿದ್ದರಾಮಯ್ಯರ ಮೇಲೆ ಅವರ ಪಕ್ಷದ ಶಾಸಕರಿಗೂ ವಿಶ್ವಾಸ ಇಲ್ಲ: B. Y. Vijayendra

ಸಿಎಂ ಸಿದ್ದರಾಮಯ್ಯರ ಮೇಲೆ ಅವರ ಪಕ್ಷದ ಶಾಸಕರಿಗೂ ವಿಶ್ವಾಸ ಇಲ್ಲ: B. Y. Vijayendra

BJP state president B. Y. Vijayendra

Shivamogga: ಮುಖ್ಯಮಂತ್ರಿ ಸಿದ್ದರಾಮಯ್ಯರ (CM Siddaramaiah) ಮೇಲಿನ ನಂಬಿಕೆ ಇತ್ತೀಚೆಗೆ ಅವರದೇ ಪಕ್ಷದ ಶಾಸಕರ ನಡುವೆ ಕಡಿಮೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president B. Y. Vijayendra) ಆರೋಪಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರದಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಕಾಡುತ್ತಿದೆ. ರಣದೀಪ್ ಸಿಂಗ್ ಸುರ್ಜೆವಾಲಾ ಪದೇ ಪದೇ ಬೆಂಗಳೂರಿಗೆ ಬರುತ್ತಿದ್ದಾರೆ, ಶಾಸಕರ ಅಭಿಪ್ರಾಯ ಕೇಳುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಬೆಂಬಲದಲ್ಲಿ ನೂರಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ,” ಎಂದರು.

“ಮುಖ್ಯಮಂತ್ರಿ ಬದಲಾಗಿದ್ರು ಸಾರ್ವಜನಿಕರ ಜೀವನದಲ್ಲಿ ಬಹುಮಟ್ಟಿಗೆ ಯಾವುದೇ ವ್ಯತ್ಯಾಸ ಆಗಲ್ಲ. ಸಿದ್ದರಾಮಯ್ಯನವರ ಸರ್ಕಾರ ಹಣಕಾಸು ಹಿನ್ನೇಟು ತಲಪಿದೆ. ಈಗಂತಿ ಹಂತದಲ್ಲಿ ಯಾವ ನಾಯಕನಾದ್ರೂ ಅಭಿವೃದ್ದಿ ತರಲು ಕಷ್ಟವೇ ಸತ್ಯ,” ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.

“ಸುರ್ಜೆವಾಲಾ ಅವರು ಏನಾದರೂ ಉದ್ದೇಶವಿಟ್ಟು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರ ಪ್ರವಾಸ ಸುಮ್ಮನೆ ಅಲ್ಲ. ಇದು ಆಡಳಿತ ಪಕ್ಷದ ನಾಯಕರುಗೂ ಗೊತ್ತಿದೆ,” ಎಂದು ಹೇಳಿದ್ದಾರೆ.

“ಶಿವಮೊಗ್ಗ, ಮಂಗಳೂರು ಮುಂತಾದೆಡೆ ದೇಶದ್ರೋಹಿಗಳಿಗೆ ಧೈರ್ಯ ಬರುತ್ತಿದೆ. ಮೈಸೂರಿನಲ್ಲಿ ಪೊಲೀಸರ ಮೇಲೆ ದಾಳಿ, ಮಂಗಳೂರಿನಲ್ಲಿ ಹತ್ಯೆ, ಇವು ಎಲ್ಲವೂ ಸರ್ಕಾರದ ಬಡಪಾಯ ನಿಯಂತ್ರಣದ ಲಕ್ಷಣಗಳು,” ಎಂದು ಹೇಳಿದರು.

“ಟಿಪ್ಪು ಜಯಂತಿ ಅಥವಾ ಗಣೇಶ ಹಬ್ಬದ ಸಂದರ್ಭಗಳಲ್ಲಿ ನಡೆದ ಗಲಭೆಗಳು ಷಡ್ಯಂತ್ರದ ಭಾಗ. ಸರ್ಕಾರ ಕ್ರಮ ಕೈಗೊಂಡಿಲ್ಲ. ಇದರಿಂದ ದುಷ್ಕರ್ಮಿಗಳಿಗೆ ಧೈರ್ಯ ಬಂದಿದೆ,” ಎಂದು ಆರೋಪಿಸಿದರು.

“ಪ್ರಧಾನಮಂತ್ರಿ ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ವಿಷಯ ಸ್ಪಷ್ಟವಾಗಬಹುದು. ಈ ಕುರಿತು ಮಾಧ್ಯಮಗಳಲ್ಲಿ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.

“ಹಾಸನದಲ್ಲಿ ಸತತ ಸಾವಿನ ಘಟನೆಗಳು ನಡೆಯುತ್ತಿವೆ. ಆದರೆ ಅಲ್ಲಿನ ಉಸ್ತುವಾರಿ ಸಚಿವರು ಅಲ್ಲಿಗೆ ಕಳೆದ ಮೂರು ತಿಂಗಳಿನಿಂದ ಭೇಟಿ ನೀಡಿಲ್ಲ. ಇದು ಸರ್ಕಾರದ ಜವಾಬ್ದಾರಿಯ ಕೊರತೆಯ ಸಾಕ್ಷಿ,” ಎಂದು ಹೇಳಿದರು.

“ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರೇ ಹಣ ಇಲ್ಲ, ಯೋಜನೆ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ಸಂಬಳಗಳಲ್ಲಿಯೂ ತಡವಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜನರು ಈಗ ಈ ಸರ್ಕಾರಕ್ಕೆ ಅಧಿಕಾರ ಕೊಟ್ಟದ್ದು ತಪ್ಪು ಅನಿಸುತ್ತಿದೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ,” ಎಂದು ವಿಜಯೇಂದ್ರ ತೀಕ್ಷ್ಣವಾಗಿ ಟೀಕಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version