back to top
21.5 C
Bengaluru
Wednesday, September 17, 2025
HomeKarnatakaDakshina KannadaMangalore Congress ಕಚೇರಿಯಲ್ಲಿ ಹೊಡೆದಾಟ

Mangalore Congress ಕಚೇರಿಯಲ್ಲಿ ಹೊಡೆದಾಟ

- Advertisement -
- Advertisement -

Mangalore: ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ (Congress office) ನಡೆದ ಹೊಡೆದಾಟ ಕುತೂಹಲ ಕೆರಳಿಸಿದೆ. ಪಂಚಾಯಿತಿ ಉಪಚುನಾವಣೆಯಲ್ಲಿ (panchayat by-election) ಆಯ್ಕೆಯಾದವರ ಸನ್ಮಾನದ ಬಗ್ಗೆ ಮಾತಿನ ಚಕಮಕಿಯಿಂದ ಆರಂಭವಾದ ವಾದವು ಕೊನೆಗೆ ಹೊಡೆದಾಟಕ್ಕೆ ತಿರುಗಿತು.

ಕಾಂಗ್ರೆಸ್ ಮುಖಂಡ ಪ್ರಕಾಶ್ ಶೆಟ್ಟಿ ತುಂಬೆ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ, ಹರೀಶ್ ಕುಮಾರ್ ಅವರತ್ತ ಹೊಡೆಯಲು ಪ್ರಕಾಶ್ ಶೆಟ್ಟಿ ಮುಂದಾದರು.

ಘಟನೆ ಬಳಿಕ, ಸಂಟ್ರಲ್ ಎಸಿಪಿ ಮತ್ತು ಕದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ನಾಯಕರು ಸಂಧಾನಕ್ಕೆ ಮುಂದಾದರೂ, ಕಚೇರಿ ಬಳಿಯ ಉದ್ವಿಗ್ನತೆ ಹತೋಟಿಗೆ ಬಾರದ ಕಾರಣ, ಹೆಚ್ಚುವರಿ ಪೊಲೀಸ್ ರಕ್ಷಣೆಯನ್ನು ನಿಯೋಜಿಸಲಾಯಿತು. ಒಂದು KSRP ತಂಡವನ್ನು ಸ್ಥಳದಲ್ಲಿ ನೇಮಿಸಲಾಗಿದೆ.

ಕಚೇರಿ ಬಳಿ ಉಭಯ ನಾಯಕರ ಬೆಂಬಲಿಗರು ಜಮಾಯಿಸುತ್ತಿದ್ದು, ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page