
Gauribidanur : ಕೋಲಾರ ಅಂಚೆ ವಿಭಾಗದಿಂದ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ (Viduraashwatha) ಹರ್ ಘರ್ ತಿರಂಗ ಕಾಲ್ನಡಿಗೆ ಜಾಥಾ (Har Ghar Tiranga Jatha) ನಡೆಸಲಾಯಿತು.
ಜಾಥಾದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕುಮಾನು ಮಾತನಾಡಿ “ಕೇಂದ್ರ ಸರ್ಕಾರವು ದೇಶದಾದ್ಯಂತ 78ನೇ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ಹರ್ ಘರ್ ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಇದೇ ಆಗಸ್ಟ್ 13ರಿಂದ 15ರವರೆಗೆ ದೇಶದ ಪ್ರತಿ ಮನೆ ಮನೆಯಲ್ಲೂ ದೇಶಭಕ್ತಿಯ ಪ್ರಜ್ಞೆ ಬೆಳಗಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ” ಎಂದು ತಿಳಿಸಿದರು.
ಕೋಲಾರ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಸ್.ಎಲ್ ನರಸಿಂಹರಾವ್ ಸೇರಿ ಅನೇಕರು ಜಾಥಾದಲ್ಲಿ ಭಾಗವಹಿಸಿದರು.
For Daily Updates WhatsApp ‘HI’ to 7406303366
The post ಹರ್ ಘರ್ ತಿರಂಗ ಕಾಲ್ನಡಿಗೆ ಜಾಥಾ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.