Bengaluru: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿ ಭಾರತ ಬಹಿಷ್ಕಾರ ಮಾಡಬೇಕೆಂಬ ಬೇಡಿಕೆ ಜೋರಾಗಿದೆ. ಇತ್ತೀಚಿನ ವರ್ಲ್ಡ್ ಚಾಂಪಿಯನ್ಸ್ ಲೀಗ್ನಲ್ಲಿ ಭಾರತೀಯ ತಂಡ ಪಾಕಿಸ್ತಾನ ವಿರುದ್ಧ (India-Pakistan match)ಆಡುವುದನ್ನು ನಿರಾಕರಿಸಿತ್ತು.
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳುವಂತೆ, ಮುಂಬರುವ ಏಷ್ಯಾಕಪ್ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವೂ ಪಾಕಿಸ್ತಾನ ವಿರುದ್ಧ ಆಡುವುದನ್ನು ತಪ್ಪಿಸಿಕೊಳ್ಳಬೇಕು. “ದೇಶದ ಮುಂದೆ ಕ್ರಿಕೆಟ್ ಅತಿ ಚಿಕ್ಕ ವಿಷಯ. ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಸೈನಿಕರ ತ್ಯಾಗ ದೊಡ್ಡದು. ಸಮಸ್ಯೆಗಳು ಬಗೆಹರಿಯುವವರೆಗೂ ಪಾಕಿಸ್ತಾನ ಜೊತೆ ಕ್ರಿಕೆಟ್ ಆಡಬಾರದು. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲಾರವು” ಎಂದು ಭಜ್ಜಿ ಹೇಳಿದ್ದಾರೆ.
ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇದ್ದು, ಮುಂದಿನ ಹಂತಕ್ಕೆ ಎರಡೂ ತಂಡಗಳು ಹೋಗುವ ಸಾಧ್ಯತೆ ಇದೆ. ಫೈನಲ್ಗೂ ತಲುಪಿದರೆ, ಒಂದು ತಿಂಗಳಲ್ಲಿ ಮೂರು ಪಂದ್ಯಗಳು ನಡೆಯುವ ಸಾಧ್ಯತೆ ಇದೆ.








