Bengaluru: ಕಳೆದ ಎರಡು ವಾರಗಳ ಬಿಸಿಲಿನ ನಂತರ ಬೆಂಗಳೂರಿನಲ್ಲಿ ಮಳೆರಾಯನ ಆಗಮನವಾಗಿದೆ. ಸೋಮವಾರ ರಾತ್ರಿ ಕೆಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ಇಂದು ಬೆಂಗಳೂರು ಸೇರಿ ಕರ್ನಾಟಕದ 21 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Heavy rain) ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ.
ಮಳೆ ನಿರೀಕ್ಷೆಯಿರುವ ಜಿಲ್ಲೆಗಳು: ದಕ್ಷಿಣ ಕನ್ನಡ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ.
ಮಳೆ ಬಿದ್ದಿರುವ ಸ್ಥಳಗಳು: ಹಿಡಕಲ್, ನಿಪ್ಪಾಣಿ, ಬೀದರ್, ಬೆಂಗಳೂರು, ಆಲಮಟ್ಟಿ, ಮಂಗಳೂರು, ಹುಣಸಗಿ, ಮುಲ್ಕಿ, ಗೌರಿಬಿದನೂರಿನಲ್ಲಿ ಮಳೆಯಾಗಿದೆ.
ಉಷ್ಣಾಂಶ ಮಾಹಿತಿ
- ಬೆಂಗಳೂರು: ಎಚ್ಎಎಲ್ನಲ್ಲಿ ಗರಿಷ್ಠ 33.1℃, ಕನಿಷ್ಠ 21.2℃
ನಗರದಲ್ಲಿ ಗರಿಷ್ಠ 33.7℃, ಕನಿಷ್ಠ 22.4℃ - ಕೆಐಎಎಲ್ನಲ್ಲಿ ಗರಿಷ್ಠ 35.5℃, ಕನಿಷ್ಠ 21.5℃
- ಜಿಕೆವಿಕೆಯಲ್ಲಿ ಗರಿಷ್ಠ 33.6℃, ಕನಿಷ್ಠ 20.6℃
- ಕಲಬುರಗಿ: ಗರಿಷ್ಠ 40.2℃ – ಇತ್ತೀಚಿನ ಗರಿಷ್ಠ ಉಷ್ಣಾಂಶ
- ಬೀದರ್: ಗರಿಷ್ಠ 39.0℃, ಕನಿಷ್ಠ 21.4℃
- ಕಾರವಾರ: ಗರಿಷ್ಠ 36.4℃, ಕನಿಷ್ಠ 26.8℃
- ಪಣಂಬೂರು: ಗರಿಷ್ಠ 34.5℃, ಕನಿಷ್ಠ 25.0℃
ಹಾವೇರಿ, ಗದಗ, ಬಾಗಲಕೋಟೆ, ಧಾರವಾಡ, ಕೊಪ್ಪಳ, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಸಹ ಸಾಧಾರಣದಿಂದ ಹೆಚ್ಚುವರಿ ಉಷ್ಣಾಂಶ ದಾಖಲಾಗಿದೆ.
ಇಂದು ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮತ್ತಷ್ಟು ಮಳೆಯ ಸಾಧ್ಯತೆ ಇದೆ. ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಇರಬೇಕು.