Thrissur: ಹಿರಿಯ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ (80) (P. Jayachandran) ಅವರು ಗುರುವಾರ ಸಂಜೆ ನಿಧನರಾದರು. ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 16,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಅವರು, ‘ಭಾವ ಗಾಯಕ’ ಎಂದು ಖ್ಯಾತರಾಗಿದ್ದರು. ಇವರ ಹೃದಯಸ್ಪರ್ಶಿ ಹಾಡುಗಳು ಪ್ರೀತಿ ಮತ್ತು ಭಕ್ತಿಯ ಭಾವನೆಗಳನ್ನು ಒಳಗೊಂಡಿದ್ದವು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು, ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ 7.55 ಕ್ಕೆ ನಿಧನ ಹೊಂದಿದರು. ಇವರನ್ನು ಪತ್ನಿ ಲಲಿತಾ, ಮಗಳು ಲಕ್ಷ್ಮೀ ಮತ್ತು ಮಗ ಗಾಯಕ ದೀನನಾಥ್ ಅವರನ್ನು ಅಗಲಿದ್ದಾರೆ.
ಅಪೂರ್ವ ಸಂಗೀತ ಸಾಧನೆ
ಪಿ.ಜಯಚಂದ್ರನ್ ಅವರು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 16,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಇವರ ಸಾಧನೆಗೆ ಹಂಚಲಾದ ಗೌರವಗಳಲ್ಲಿ ರಾಷ್ಟ್ರಪ್ರಶಸ್ತಿ ಮತ್ತು ಕೇರಳ ರಾಜ್ಯ ಸಿನಿಮಾಏ ಪ್ರಶಸ್ತಿ ಸೇರಿವೆ. ಅವರು 5 ಬಾರಿ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿ, 2 ಬಾರಿ ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿ ಪಡೆದವರು.
ಜನಪ್ರಿಯ ಕನ್ನಡ ಹಾಡುಗಳು
- ಹಿಂದೂಸ್ಥಾನವು ಎಂದೂ ಮರೆಯದ (ಅಮೃತ ಘಳಿಗೆ)
- ಮಂದಾರ ಪುಷ್ಪವು ನೀನು (ರಂಗನಾಯಕಿ)
- ಕನ್ನಡ ನಾಡಿನ ಕರಾವಳಿ (ಮಸಣದ ಹೂವು)
- ಕಾಲ್ಗೆಜ್ಜೆ ತಾಳಕ್ಕೆ (ಮುನಿಯನ ಮಾದರಿ)
- ಚಂದ ಚಂದ (ಮಾನಸ ಸರೋವರ)
- ಪ್ರೇಮದ ಶ್ರುತಿ ಮೀಟಿದೆ (ಗಣೇಶನ ಮದುವೆ)
- ಜೀವಂತ ಸಂಜೀವನ (ಹಂತಕನ ಸಂಚು)
ಕೇರಳದ ಎರ್ನಾಕುಲಂನ ಹುಟ್ಟಿದ ಜಯಚಂದ್ರನ್ ಅವರು 1958ರಲ್ಲಿ ಮೃದಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಅವರು ಗುರುತಿಸಿಕೊಂಡ ಸುಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್ ಅವರನ್ನು ಭೇಟಿಯಾಗಿ, ಅವರ ಜೊತೆಗೆ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಗಳಿಸಿದರು.
ಜಯಚಂದ್ರನ್ ಅವರ ಪಾರ್ಥಿವ ಶರೀರವನ್ನು ತ್ರಿಶೂರ್ ನ ಪೂಮ್ಕುನ್ನಮ್ಗೆ ಕೊಂಡೊಯ್ಯಲಿದ್ದು, ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮತ್ತು ದೇಶ-ವಿದೇಶದ ಗಣ್ಯರು, ಅಭಿಮಾನಿಗಳು ಜಯಚಂದ್ರನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.