Home Karnataka Honeytrap allegation: ಡಿಕೆಶಿ ವಿರುದ್ಧ ಮುನಿರತ್ನ, ಕೆಎನ್ ರಾಜಣ್ಣ ತಿರುಗೇಟು

Honeytrap allegation: ಡಿಕೆಶಿ ವಿರುದ್ಧ ಮುನಿರತ್ನ, ಕೆಎನ್ ರಾಜಣ್ಣ ತಿರುಗೇಟು

140
KN Rajanna

Tumkur: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ (Honeytrap allegation) ಚರ್ಚೆಯ ವಿಷಯವಾಗಿದೆ. ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ವಾಗ್ಯುದ್ಧ ನಡೆಸುತ್ತಿದ್ದಾರೆ. ಹನಿಟ್ರ್ಯಾಪ್ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಶಾಸಕ ಮುನಿರತ್ನ ಆರೋಪಿಸಿದರೆ, ಸಚಿವ ಕೆಎನ್ ರಾಜಣ್ಣ ಇದಕ್ಕೆ ತಿರುಗೇಟು ನೀಡಿದ್ದಾರೆ.

ಮುನಿರತ್ನ ಮಾಡಿದ ಹನಿಟ್ರ್ಯಾಪ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜಣ್ಣ, “ಅದು ಅವರ ಅಭಿಪ್ರಾಯ, ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ದೂರು ನೀಡಲು ಸಚಿವ ರಾಜಣ್ಣ ಮುಂದಾಗಿದ್ದಾರೆ. “ಬೆಂಗಳೂರಿಗೆ ಹೋಗುತ್ತಿದ್ದೇನೆ, ಶೀಘ್ರದಲ್ಲೇ ದೂರು ಕೊಡುತ್ತೇನೆ. ಆದರೆ, ದೂರು ಕೊಡಲು ಇನ್ನೂ ಸಮಯ ನಿಗದಿ ಮಾಡಿಲ್ಲ” ಎಂದು ಹೇಳಿದ್ದಾರೆ.

ಹನಿಟ್ರ್ಯಾಪ್ ವಿಚಾರ ಕಾಂಗ್ರೆಸ್‌ನಲ್ಲಿ ದೊಡ್ಡ ಸಂಚಲನ ತಂದಿದೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಸಿದ್ದರಾಮಯ್ಯ ಗುಪ್ತ ಚರ್ಚೆ ನಡೆಸಿದ್ದಾರೆ. “ಇದರಲ್ಲೇನೂ ವಿಶೇಷ ಇಲ್ಲ, ಪರಸ್ಪರ ಆರೋಗ್ಯ ವಿಚಾರಿಸಿದ್ದಾರೆ” ಎಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page