back to top
23.9 C
Bengaluru
Wednesday, April 16, 2025
HomeIndiaHyderabad Bomb Blast: ಯಾಸಿನ್ ಭಟ್ಕಳ್ ಸೇರಿ ಐವರಿಗೆ ಮರಣದಂಡನೆಗೆ ಹೈಕೋರ್ಟ್ ಸಮ್ಮತಿ

Hyderabad Bomb Blast: ಯಾಸಿನ್ ಭಟ್ಕಳ್ ಸೇರಿ ಐವರಿಗೆ ಮರಣದಂಡನೆಗೆ ಹೈಕೋರ್ಟ್ ಸಮ್ಮತಿ

- Advertisement -
- Advertisement -

Telangana: 2013ರಲ್ಲಿ ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟ (Hyderabad bomb blast) ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್ ಭಟ್ಕಳ್ ಸೇರಿ ಐವರು ಭಯೋತ್ಪಾದಕರಿಗೆ ನೀಡಲಾದ ಮರಣದಂಡನೆಯನ್ನು ತೆಲಂಗಾಣ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.

ಈ ಐವರು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರಾಗಿದ್ದು, 2013ರ ಫೆಬ್ರವರಿ 21ರಂದು ದಿಲ್ಸುಖ್‌ನಗರದ ಬಸ್ ನಿಲ್ದಾಣ ಮತ್ತು ತಿನಿಸು ಮಳಿಗೆ ಬಳಿ ಎರಡು ಸ್ಫೋಟಗಳನ್ನು ನಡೆಸಿದ್ದರು. ಈ ದಾಳಿ 18 ಜನರ ಸಾವಿಗೆ ಹಾಗೂ 131 ಜನರ ಗಾಯಕ್ಕೆ ಕಾರಣವಾಗಿತ್ತು.

ಈ ಪ್ರಕರಣವನ್ನು ಎನ್‌ಐಎ (NIA) ತನಿಖೆ ನಡೆಸಿದ್ದು, 2016ರ ಡಿಸೆಂಬರ್ 13ರಂದು ಐಎಂ ಸಹ ಸ್ಥಾಪಕ ಯಾಸಿನ್ ಭಟ್ಕಳ್, ಪಾಕಿಸ್ತಾನಿಯ ವಕಾಸ್, ಮೊನ್ಜಾ ಹದ್ದಿ ಸೇರಿ ಐವರು ದೋಷಿಗಳೆಂದು ಎನ್‌ಐಎ ನ್ಯಾಯಾಲಯ ಘೋಷಿಸಿತ್ತು.

ಈ ತೀರ್ಪಿನ ವಿರುದ್ಧ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದರೂ, ಹೈಕೋರ್ಟ್ ಅದು ಮಾನ್ಯವಾಗದೆ, ಎನ್‌ಐಎ ನ್ಯಾಯಾಲಯ ನೀಡಿದ್ದ ಮರಣದಂಡನೆಯನ್ನು ಪುಷ್ಟಿಪಡಿಸಿದೆ.

ಪ್ರಾಸಿಕ್ಯೂಷನ್ ವಕೀಲರು ತಿಳಿಸಿದ್ದಾರೆ, ಈ ಪ್ರಕರಣವು ಅಪರೂಪದಲ್ಲೇ ಅಪರೂಪದ (rarest of rare) ಪ್ರಕರಣವಾಗಿದ್ದು, ಭಯೋತ್ಪಾದಕ ಚಟುವಟಿಕೆಯುಳ್ಳ ಪ್ರಕರಣವಾಗಿದೆ.

ಆರಂಭದಲ್ಲಿ ಈ ಪ್ರಕರಣವನ್ನು ನಗರ ಪೊಲೀಸರ ವಿಶೇಷ ತನಿಖಾ ತಂಡ (SIT) ವಹಿಸಿಕೊಂಡಿತ್ತು. ಈ ನಡುವೆ ಪ್ರಮುಖ ಆರೋಪಿ ರಿಯಾಜ್ ಭಟ್ಕಳ್ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page