Home Karnataka Commission ಕೇಳಿದರೆ ಲೋಕಾಯುಕ್ತಕ್ಕೆ ದೂರು ನೀಡಿರಿ: DCM D.K. Shivakumar

Commission ಕೇಳಿದರೆ ಲೋಕಾಯುಕ್ತಕ್ಕೆ ದೂರು ನೀಡಿರಿ: DCM D.K. Shivakumar

DCM D.K. Shivakumar

Bengaluru: ಗುತ್ತಿಗೆದಾರರಿಂದ ಬಿಲ್ ಪಾವತಿಗೆ ಕಮಿಷನ್ ಕೇಳುತ್ತಿರುವುದಾದರೆ, ಅದು ತಪ್ಪು ಎತ್ತಿಹಿಡಿಯಲು ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಬಿಲ್ ಪಾವತಿ ಸಂಬಂಧ ಯಾರಾದರೂ ಕಮಿಷನ್ ಕೇಳಿದರೆ, ಗುತ್ತಿಗೆದಾರರು ನೇರವಾಗಿ ಲೋಕಾಯುಕ್ತದ ಬಳಿ ಹೋಗಬೇಕು. ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಬೋಸರಾಜು ಈ ವಿಚಾರದಲ್ಲಿ ಭಾಗಿಯಾಗಿಲ್ಲ,” ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಮುಂದುವರೆದು ಹೇಳಿದರು: “ಅನುದಾನವಿಲ್ಲದೇ ಗುತ್ತಿಗೆ ಪಡೆದಿರುವುದು ಹೇಗೆ ಸಾಧ್ಯ? ಬಿಲ್ ಪಾವತಿಗೆ ಸಚಿವರಿಗೆ ಕೇಳುವುದು ಸರಿಯಲ್ಲ. ಅವರಿಗೆ ಇಲಾಖೆಯ ಬಜೆಟ್ ಬಗ್ಗೆ ಮಾಹಿತಿ ಇರಬೇಕು. ಚುನಾವಣೆಗೂ ಮೊದಲು ನಾವು ಎಚ್ಚರಿಕೆ ನೀಡಿದ್ದೆವು—ಅನುದಾನವಿಲ್ಲದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬೇಡಿ ಎಂದು. ಆದರೆ, ಈಗ ರಾಜಕೀಯ ನಾಯಕರ ಮುಖಾಂತರ ಬಿಲ್ ಪಾವತಿಗೆ ಮನವಿ ಮಾಡುತ್ತಿದ್ದಾರೆ.”

“ಬಿಜೆಪಿ ಸರ್ಕಾರದ ಕಾಲದಲ್ಲಿ, ನನ್ನೊಬ್ಬರ ಇಲಾಖೆಯಲ್ಲೇ ₹1 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆ ನೀಡಲಾಗಿದೆ. ಈಗ ಆ ಬಿಲ್‌ ಪಾವತಿಗೆ ಶಾಸಕರ ಮುಖಾಂತರ ಒತ್ತಾಯ ಮಾಡಲಾಗುತ್ತಿದೆ,” ಎಂದು ಅವರು ಆರೋಪಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕುರಿತ ಚರ್ಚೆಯ ಬಗ್ಗೆ ಮಾತನಾಡಿದ ಅವರು, “ನಾನು ಹಾಗೂ ಮುಖ್ಯಮಂತ್ರಿಗಳು ಇನ್ನೂ ಜಾತಿಗಣತಿ ವರದಿಯನ್ನು ಓದಿಲ್ಲ. ಓದಿದ ನಂತರ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಈಗಲೇ ಈ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಲು ಸಾಧ್ಯವಿಲ್ಲ,” ಎಂದು ಹೇಳಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version