back to top
19.4 C
Bengaluru
Wednesday, January 28, 2026
HomeNewsPakistan ದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಮೂಲಸೌಕರ್ಯ ಕತ್ತರಿ

Pakistan ದಲ್ಲಿ ಭಾರತೀಯ ರಾಜತಾಂತ್ರಿಕರಿಗೆ ಮೂಲಸೌಕರ್ಯ ಕತ್ತರಿ

- Advertisement -
- Advertisement -

Islamabad: ಭಾರತ–ಪಾಕಿಸ್ತಾನ ಸಂಬಂಧಗಳು ಮತ್ತೊಮ್ಮೆ ತೀವ್ರ ಉದ್ವಿಗ್ನತೆಯ ಹಾದಿ ಹಿಡಿದಿವೆ. ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನ ಭಾರತೀಯ ಹೈಕಮಿಷನ್ ಸಿಬ್ಬಂದಿಗೆ ಕಿರುಕುಳ ಹೆಚ್ಚಿಸಿದೆ.

ವರದಿಗಳ ಪ್ರಕಾರ, ಭಾರತೀಯ ಹೈಕಮಿಷನ್ ಮತ್ತು ರಾಜತಾಂತ್ರಿಕರ ಮನೆಗಳಿಗೆ ಪತ್ರಿಕೆ ವಿತರಣೆ ನಿಲ್ಲಿಸಲಾಗಿದೆ. ಗ್ಯಾಸ್, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಪೂರೈಕೆಗೂ ತೊಂದರೆ ಉಂಟುಮಾಡಲಾಗುತ್ತಿದೆ. ಸ್ಥಳೀಯ ಮಾರಾಟಗಾರರಿಗೆ ಭಾರತೀಯ ಸಿಬ್ಬಂದಿಗೆ ಸರಕು ಪೂರೈಸಬಾರದು ಎಂದು ಪಾಕಿಸ್ತಾನಿ ಅಧಿಕಾರಿಗಳು ಆದೇಶಿಸಿದ್ದಾರೆ.

ಇದೇ ರೀತಿ, ಕಚೇರಿ ಮತ್ತು ನಿವಾಸಗಳಿಗೆ ಅನಧಿಕೃತ ಪ್ರವೇಶ, ಕಣ್ಗಾವಲು ಹೆಚ್ಚಿಸುವಂತಹ ಕ್ರಮಗಳ ಮೂಲಕ ನೆಮ್ಮದಿ ಕಸಿಯಲಾಗುತ್ತಿದೆ. 2019ರ ಪುಲ್ವಾಮಾ ದಾಳಿಯ ನಂತರವೂ ಇದೇ ರೀತಿಯ ಕಿರುಕುಳ ನೀಡಲಾಗಿತ್ತು. ಈಗ ಮತ್ತೆ ಪಾಕಿಸ್ತಾನ ತನ್ನ ಹಳೆಯ ಶೈಲಿಯ ಪ್ರತೀಕಾರವನ್ನು ತೋರಿಸುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page