back to top
22.7 C
Bengaluru
Wednesday, October 29, 2025
HomeKarnatakaಅಸಮಾನತೆ ಹಿಂದೂ ಸಮಾಜದಲ್ಲೇನಾ?: ಸಿಎಂಗೆ C.T. Ravi ಬಹಿರಂಗ ಪತ್ರ

ಅಸಮಾನತೆ ಹಿಂದೂ ಸಮಾಜದಲ್ಲೇನಾ?: ಸಿಎಂಗೆ C.T. Ravi ಬಹಿರಂಗ ಪತ್ರ

- Advertisement -
- Advertisement -

Bengaluru: “ಹಿಂದೂ ಸಮಾಜದಲ್ಲೇ ಅಸಮಾನತೆ ಇದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ (C.T. Ravi) ಬಹಿರಂಗ ಪತ್ರ ಬರೆದಿದ್ದಾರೆ.

  • ಅವರು ಪತ್ರದಲ್ಲಿ ಹೀಗೆ ಪ್ರಶ್ನಿಸಿದ್ದಾರೆ,
  • ಅಸಮಾನತೆ ಬರೀ ಹಿಂದೂ ಸಮಾಜದಲ್ಲೇನಾ? ಶ್ರೀಮಂತ–ಬಡ, ವಿದ್ಯಾವಂತ–ಅವಿದ್ಯಾವಂತ, ಅಧಿಕಾರಿಗಳ ನಡುವೆಯೂ ಅಸಮಾನತೆ ಇದೆ. ನಿಮ್ಮ ಕಾಂಗ್ರೆಸ್ ಪಕ್ಷದಲ್ಲೂ ಅಸಮಾನತೆ ಇದೆ.
  • ಇತ್ತೀಚೆಗೆ ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ ಸಚಿವ ರಾಜಣ್ಣ ಅವರನ್ನು ರಾಜೀನಾಮೆ ಕೊಡಿಸಲಿಲ್ಲವೇ? ಇದು ಅಸಮಾನತೆ ಅಲ್ಲವೇ?
  • “ನಮಸ್ತೆ ಸದಾ ವತ್ಸಲೆ ಮಾತೃಭೂಮಿ” ಎಂದ ಕಾಂಗ್ರೆಸ್ ನಾಯಕನಿಗೆ ಕ್ಷಮೆ ಕೇಳಿಸಿದ ಘಟನೆ ಕೂಡ ಅಸಮಾನತೆಯ ಉದಾಹರಣೆ.
  • ಅವರು ಕ್ರಿಶ್ಚಿಯನ್, ಮುಸ್ಲಿಂ ಸಮಾಜದಲ್ಲೂ ಜಾತಿ–ತಾರತಮ್ಯ ಇದೆ ಎಂದೂ, ಅಮೆರಿಕದಲ್ಲೇ ವೈಟ್–ಬ್ಲಾಕ್ ಭೇದವಿದೆ ಎಂದೂ ಹೇಳಿದ್ದಾರೆ.
  • ಹಿಂದೂ ಧರ್ಮದ ತತ್ವಗಳು,
  • “ಸರ್ವೇಜನೋ ಸುಖಿನೋ ಭವಂತು”, “ವಸುಧೈವ ಕುಟುಂಬಕಂ” ಎಂಬ ಸಂದೇಶ ಕೊಟ್ಟ ಧರ್ಮ ಹಿಂದೂ ಧರ್ಮ ಮಾತ್ರ.
  • ವೇದ, ವಚನ, ದಾಸವಾಣಿಗಳಲ್ಲಿ ಅಸಮಾನತೆಯನ್ನು ಸಮರ್ಥಿಸುವುದಿಲ್ಲ. ಬುದ್ಧ, ಬಸವಣ್ಣ, ರಾಮಾನುಜ, ಕನಕದಾಸರಂಥವರು ಸಮಾನತೆ ಸಾರಿದ್ದಾರೆ.

ಕೊನೆಗೆ, “ಮತ್ತೆಲ್ಲ ಧರ್ಮಗಳಲ್ಲೂ ಜಾತಿ–ಅಸಮಾನತೆ ಇದೆ. ಹಿಂದೂ ಧರ್ಮದಲ್ಲಿ ಕೆಲ ಅಸಮಾನತೆಗಳಿದ್ದರೂ, ಸಮಾನತೆಯ ಮೌಲ್ಯಗಳನ್ನು ಸಾರಿದ ಗ್ರಂಥಗಳೂ ನಮ್ಮಲ್ಲಿವೆ” ಎಂದು ಸಿ.ಟಿ. ರವಿ ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page