back to top
21.6 C
Bengaluru
Saturday, October 11, 2025
HomeBusinessKailash-Mansarovar ಯಾತ್ರೆ ಪುನರಾರಂಭ

Kailash-Mansarovar ಯಾತ್ರೆ ಪುನರಾರಂಭ

- Advertisement -
- Advertisement -

 

Delhi: ಭಾರತ ಮತ್ತು ಚೀನಾ, 2 ದಿನಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ ಕೈಲಾಸ-ಮಾನಸ ಸರೋವರ (Kailash-Mansarovar) ಯಾತ್ರೆಯನ್ನು ಪುನರಾರಂಭಿಸಲು ನಿರ್ಧರಿಸಿವೆ. ಅಸ್ತಿತ್ವದಲ್ಲಿರುವ ಒಪ್ಪಂದಗಳ ಪ್ರಕಾರ, ಈ ಯಾತ್ರೆಯನ್ನು ಪುನರಾರಂಭಿಸುವ ಕ್ರಮಗಳನ್ನು ಚರ್ಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. 

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ ಕಾರ್ಯವಿಧಾನದ ಸಭೆಗಾಗಿ ಬೀಜಿಂಗ್ಗೆ ಭೇಟಿ ನೀಡಿದರು. ಇದು 2025ರ ಬೇಸಿಗೆಯಲ್ಲಿ ಯಾತ್ರೆಯನ್ನು ಪುನರಾರಂಭಿಸಲು ದಾರಿತೋರಲು ಸಹಾಯ ಮಾಡಿತು. 

ಅಕ್ಟೋಬರ್ ನಲ್ಲಿ ಕಜಾಕಿಸ್ತಾನದ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್, ದ್ವಿಪಕ್ಷೀಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಹಲವು ಕ್ರಮಗಳಿಗೆ ಒಪ್ಪಿಕೊಂಡಿದ್ದರು. 

ಭಾರತ-ಚೀನಾ ನಡುವಿನ ನೇರ ವಿಮಾನ ಸೇವೆಗಳನ್ನು ಬಳಸಿಕೊಂಡು ಕೈಲಾಸ-ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲು ಎರಡೂ ದೇಶಗಳು ಸಿದ್ಧತೆ ನಡೆಸಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page