back to top
21.1 C
Bengaluru
Monday, October 27, 2025
HomeIndiaNew Delhiಖಲಿಸ್ತಾನಿ ಬೆದರಿಕೆ ಹಿನ್ನೆಲೆ: ಕೆನಡಾದ ಹೈಕಮಿಷನರ್‌ಗೆ ಭಾರತ ನೋಟಿಸ್

ಖಲಿಸ್ತಾನಿ ಬೆದರಿಕೆ ಹಿನ್ನೆಲೆ: ಕೆನಡಾದ ಹೈಕಮಿಷನರ್‌ಗೆ ಭಾರತ ನೋಟಿಸ್

- Advertisement -
- Advertisement -

New Delhi : ಕೆನಡಾದಲ್ಲಿರುವ ಭಾರತೀಯ ರಾಯಭಾರಿಗಳಿಗೆ ಖಲಿಸ್ತಾನಿ (Khalistan) ಬೆದರಿಕೆ ಹಾಕುವ ಪೋಸ್ಟರ್‌ಗಳ ಕುರಿತಾಗಿ ಭಾರತವು ಕೆನಡಾದ ಹೈಕಮಿಷನರ್‌ಗೆ ನೋಟಿಸ್ ನೀಡಿದೆ.

ಖಲಿಸ್ತಾನಿ ಪರ ಕಾರ್ಯಕರ್ತರು ಟೊರೊಂಟೊದಲ್ಲಿ ರ್ಯಾಲಿಯನ್ನು ಆಯೋಜಿಸಿದ್ದು, ಒಟ್ಟಾವಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ಟೊರೊಂಟೊದಲ್ಲಿನ ರಾಜತಾಂತ್ರಿಕ ಅಧಿಕಾರಿಯ ವಿರುದ್ಧ ಬೆದರಿಕೆಯ ಪೋಸ್ಟರ್ಗಳನ್ನು ಹಾಕಿದ್ದರು ಎನ್ನಲಾಗಿದೆ. ಇದರ ಪ್ರತಿ ಭಾರತ ಸರ್ಕಾರ ಕ್ರಮ ಕೈಗೊಂಡಿದ್ದು, ನವದೆಹಲಿಯಲ್ಲಿರುವ ಕೆನಡಾ ಹೈಕಮಿಷನರ್ ಅವರನ್ನು ಬರಲು ಹೇಳಿದೆ.

ಪೋಸ್ಟರ್‌ಗಳಲ್ಲಿ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ವಿಷಯದ ಕುರಿತು ಕೆನಡಾದ ವಿದೇಶಾಂಗ ಸಚಿವೆ ಮೆಲನಿ ಜೋಲಿ ಅವರು ಭಾರತೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page