back to top
25.2 C
Bengaluru
Friday, July 18, 2025
HomeKarnatakaಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಸರ್ಕಾರಿ ಭೂಕಬಳಿಕೆ ಆರೋಪ

- Advertisement -
- Advertisement -

Bengaluru: ಮಾಗಡಿ ಕ್ಷೇತ್ರದ ಶಾಸಕ HC ಬಾಲಕೃಷ್ಣ (MLA HC Balakrishna) ವಿರುದ್ಧ 1600 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಆರೋಪ ಬಂದಿದೆ. ಎನ್ಆರ್ ರಮೇಶ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೂ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೆಂಗೇರಿಯ ಸರ್ವೇ ನಂಬರ್ 69 ರ 183 ಎಕರೆ ಭೂಮಿಯನ್ನು ಕುರಿತು ವಿವಾದಗಳು ಉಂಟಾಗಿವೆ. 1973 ರಲ್ಲಿ 25 ಜನ ಜಮೀನುರಹಿತರಿಗೆ ಈ ಭೂಮಿಯನ್ನು ಹಂಚಿಕೆಯಾಗಿತ್ತು. SC/ST ಸಮುದಾಯದವರಿಗೆ ಪ್ರತಿ ಜನರಿಗೆ 1.20 ಎಕರೆ ಜಾಗ ಹಂಚಿಕೆಯಾಗಿತ್ತು. ಈ ಜಾಗದಲ್ಲಿ ಹಲವಾರು ಫಲಾನುಭೋಗಿಗಳು ನಿಧನರಾದರು.

ಸರ್ಕಾರದ ಅನುಮತಿ ಇಲ್ಲದೆ, ಸುರೇಂದ್ರ ಎಂಬ ವ್ಯಕ್ತಿ ಈ ಜಾಗವನ್ನು ಮಾರಾಟ ಮಾಡಲು ಸಂಚು ಹಾಕಿದ್ದರು ಎಂದು ಆರೋಪಿಸಲಾಗಿದೆ. ಸುರೇಂದ್ರ, ಕೆಎಸ್ಎಸ್ ರೆಸಿಡೆನ್ಸಿ ಕಂಪನಿಯ ಮಾಲೀಕರಾಗಿದ್ದು, ಅವರು ಹಾಗೂ ಕೆಲ ಪ್ರಭಾವಿಗಳ ಸಹಕಾರದಿಂದ ಈ ಮಾರಾಟ ನಡೆದಿರುವುದಾಗಿ ಆರೋಪಿಸಲಾಗಿದೆ.

ಕೆಂಗೇರಿ ಗ್ರಾಮದಲ್ಲಿ 183 ಎಕರೆ ಸರ್ಕಾರಿ ಭೂಮಿಯು “ಸರ್ಕಾರಿ ಬಂಡೆ” ಪ್ರದೇಶವಾಗಿ ಪರಿಗಣಿಸಲಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುವುದಿಲ್ಲ. ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಉಲ್ಲಂಘಿಸಿ, ನಕಲಿ ದಾಖಲೆಗಳನ್ನು ತಯಾರಿಸಿ, ಈ ಭೂಮಿಯನ್ನು ಕಬಳಿಸುವಲ್ಲಿ ಸಹಕಾರ ನೀಡಿದರೆಂದು ದೂರಿನಲ್ಲಿ ಹೇಳಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page