back to top
21.4 C
Bengaluru
Wednesday, January 28, 2026
HomeKarnatakaಮೇಕೆದಾಟು ಯೋಜನೆ: Kumaraswamy ಕಾಂಗ್ರೆಸ್  ಗೆ ಸವಾಲು

ಮೇಕೆದಾಟು ಯೋಜನೆ: Kumaraswamy ಕಾಂಗ್ರೆಸ್  ಗೆ ಸವಾಲು

- Advertisement -
- Advertisement -

Mysore: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (Union Minister H.D. Kumaraswamy) ಕಾಂಗ್ರೆಸ್ ಗೆ ಸವಾಲು ಹಾಕಿದ್ದು, “ಮೇಕೆದಾಟು ಯೋಜನೆಗೆ ತಮಿಳುನಾಡಿನ ಮಿತ್ರಪಕ್ಷದಿಂದ ಒಪ್ಪಿಗೆ ತರುತ್ತಾರೆ ಎಂಬ ಶಕ್ತಿ ಇದ್ದರೆ ತೋರಿಸಲಿ. ನಾನು ಐದು ನಿಮಿಷದಲ್ಲಿ ಪ್ರಧಾನಿ ಮೋದಿ ಅವರ ಒಪ್ಪಿಗೆ ತರುತ್ತೇನೆ” ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ಶಕ್ತಿ ಇಲ್ಲವಷ್ಟೆ ಅಲ್ಲ, ಅವರ ವಿರುದ್ಧ ಧಿಕ್ಕರಿಸುವ ಧೈರ್ಯವೂ ಇಲ್ಲ ಎಂದ ಅವರು, “ತಮಿಳುನಾಡು ಒಪ್ಪದೆ ಯೋಜನೆಯ ಕಚೇರಿ ತೆರೆದರೆ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

“ಯೋಜನೆ ಬಗ್ಗೆ ಜನರಿಗೆ ಭರವಸೆ ಕೊಟ್ಟವರು ಕಾಂಗ್ರೆಸ್. ಯೋಜನೆ ಜಾರಿಗೆ ತರಬೇಕಾದ ಜವಾಬ್ದಾರಿ ಅವರದು, ನನ್ನದು ಅಲ್ಲ” ಎಂದ ಅವರು, ಪ್ರಸ್ತುತ ಸಮಯ ಕೇವಲ ಸಮಯ ವ್ಯರ್ಥ ಮಾಡುತ್ತಿರುವಂತಿದೆ ಎಂದು ತೀವ್ರ ಟೀಕೆ ಮಾಡಿದರು.

ಮೈಸೂರಿನಲ್ಲಿ ನಡೆದ ದಿಶಾ ಸಭೆಗೆ ಕುಮಾರಸ್ವಾಮಿ ನೇತೃತ್ವ ನೀಡಿದರು. ಆದರೆ ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ಮತ್ತು ಕೆಲವು ಕಾಂಗ್ರೆಸ್ ಶಾಸಕರು ಸಭೆಗೆ ಹಾಜರಾಗಲಿಲ್ಲ. ಸಭೆಯಲ್ಲಿ ಸಂಸದ ಯದುವೀರ್, ಶಾಸಕ ಶ್ರೀವತ್ಸ, ಹಾಗೂ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು.

ಚಲುವರಾಯಸ್ವಾಮಿ, “ಕುಮಾರಸ್ವಾಮಿ ಕೇವಲ ಸಂಸದರ ಅನುದಾನ ತಂದಿದ್ದಾರೆ” ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, “ನಾನು ವಿಶೇಷ ಅನುದಾನಗಳನ್ನೂ ತಂದಿದ್ದೇನೆ. ನನಗೆ ಪೂರ್ವ ನಿಗದಿತ ಸಭೆಗಳ ಕಾರಣ ಸಭೆಗೆ ಹಾಜರಾಗಲಾಗಿಲ್ಲ” ಎಂದು ಸ್ಪಷ್ಟಪಡಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page