back to top
17.5 C
Bengaluru
Wednesday, February 18, 2026
HomeKarnatakaMysuruMUDA scam ಹಗರಣ: ದಾಖಲೆ ಕಳ್ಳತನ ಅಥವಾ ನಾಶ?

MUDA scam ಹಗರಣ: ದಾಖಲೆ ಕಳ್ಳತನ ಅಥವಾ ನಾಶ?

- Advertisement -
- Advertisement -

ಮೈಸೂರು (Mysuru) ನಗರಾಭಿವೃದ್ಧಿ ಪ್ರಾಧಿಕಾರದ (MUDA) ಅಕ್ರಮ ಹಗರಣವು ಹೊಸ ತಿರುವು ಪಡೆದುಕೊಂಡಿದ್ದು, ಪ್ರಾಧಿಕಾರದ ಮೂಲ ದಾಖಲೆಗಳು ನಾಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.


MUDA ಕಚೇರಿಯ ಕೆಲವು ಫೈಲ್​ಗಳನ್ನ ಕಳ್ಳತನವಾಗಿರುವುದಾಗಿ ಅಥವಾ ಸುಟ್ಟುಹಾಕಲ್ಪಟ್ಟಿರುವುದಾಗಿ ಆರೋಪಿಸಲಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ಈ ಪ್ರಕರಣಕ್ಕೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಗರಣವು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದ್ದು, ಹಲವು ನಾಯಕರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಕೆಲ ಆರೋಪಿಗಳನ್ನು ವಿಚಾರಣೆಗಾಗಿ ಡಿಸೈನ್ ಮಾಡಿದ ಲೋಕಾಯುಕ್ತ ಸ್ಪಷ್ಪ ಟಿಪ್ಪಣಿಗಳನ್ನು ಬಿಡುಗಡೆ ಮಾಡಿದ್ದು, ಪ್ರಕರಣದ ತೀವ್ರತೆಯನ್ನು ಹೆಚ್ಚು ಮಾಡಿದೆ.

ಭೈರತಿ ಸುರೇಶ್ ಅವರನ್ನ ಕೂಡಲೇ ಬಂಧಿಸಬೇಕು ಎಂದಿದ್ದಾರೆ. ಅಲ್ಲದೆ ಹಿಂದಿನ ಲೋಕಾಯುಕ್ತ ಎಸ್​ಪಿ‌ ಸಜೀತ್ ಹಾಗು ಅಧಿಕಾರಿ ವೆಂಕಟಾಚಲಪತಿ ಅವರನ್ನೂ ಬಂಧಿಸಬೇಕು. ಮುಡಾ ಅಕ್ರಮ ಕುರಿತು ಸರ್ಚ್ ವಾರೆಂಟ್ ನೀಡುವ ಮುನ್ನ ಫೈಲ್ ಮಾಯವಾಗಿದೆ. ಇದಕ್ಕೆ ಲೋಕಾಯುಕ್ತ ಹಿಂದಿನ ಎಸ್​ಪಿ ಸಜೀತ್, ನಗರಾಭಿವೃದ್ಧಿ ಕಾರ್ಯದರ್ಶಿ ವೆಂಕಟಾಚಲಪತಿ ಕಾರಣ ಎಂದು ಆರೋಪಿಸಲಾಗಿದೆ.

ನಟೇಶ್ ಮತ್ತು ಮುಡಾ ಅಧಿಕಾರಿಗಳ ವಿರುದ್ಧ ಕಾನೂನು ಬಾಹಿರ ನಿವೇಶನ ಹಂಚಿಕೆ ಆರೋಪ. ಸಿಎಂ ಸಿದ್ದರಾಮಯ್ಯ ಪತ್ನಿಗೆ 14 ನಿವೇಶನಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ ಎಂಬ ಗಂಭೀರ ಆರೋಪ ಕೂಡ ಇದೆ.

ಪ್ರಕರಣದ ತನಿಖೆ ಮುಂದುವರೆಯುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಗಳು ಹೆಚ್ಚುತ್ತಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page