Home Karnataka Bengaluru Rural NDA ಅಭ್ಯರ್ಥಿಯಾಗಿ Nikhil Kumaraswamy ನಾಮಪತ್ರ ಸಲ್ಲಿಕೆ

NDA ಅಭ್ಯರ್ಥಿಯಾಗಿ Nikhil Kumaraswamy ನಾಮಪತ್ರ ಸಲ್ಲಿಕೆ

Channapatna Election Nikhil Kumaraswamy NDA Candidate

Channapatna ಉಪಚುನಾವಣೆಗೆ JDS-BJP ಮೈತ್ರಿ ಅಭ್ಯರ್ಥಿ ಆಯ್ಕೆ ಕುರಿತು ಗೊಂದಲಗಳ ನಂತರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರನ್ನು ಗುರುವಾರ NDA ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ನಿಖಿಲ್ ಪ್ರವೇಶದಿಂದ ಚುನಾವಣಾ ಕಾವು ತೀವ್ರಗೊಂಡಿದ್ದು, ಪೈಪೋಟಿಗೆ ವೇದಿಕೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಗೆ ಪೈಪೋಟಿ ನೀಡಲು ಬಿಜೆಪಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ (CP Yogeshwar), ನಿಖಿಲ್ ಮತ್ತು ಸುಮಲತಾ ಅಂಬರೀಷ್ ನಡುವಿನ ಹೈ-ಪ್ರೊಫೈಲ್ ಮಂಡ್ಯ ಲೋಕಸಭೆ ಸ್ಪರ್ಧೆಗೆ ಈ ಉಪಚುನಾವಣೆಯನ್ನು ಹೋಲಿಕೆ ಮಾಡಲಾಗುತ್ತಿದೆ.

ತೀವ್ರ ರಾಜಕೀಯ ಪೈಪೋಟಿಯ ನಂತರ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವುದರಿಂದ BJP-JDS ನಾಯಕರ ಜೊತೆ ಇಂದು (ಆ.25) ಅಧಿಕೃತವಾಗಿ ಅವರು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸೋಲು ಕಂಡಿದ್ದ ನಿಖಿಲ್, 2023 ರ ರಾಮನಗರ ವಿಧಾನಸಭಾ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ಅವರಿಂದ ಪರಾಭವಗೊಂಡಿದ್ದರು. ಇದೀಗ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version