Home Karnataka Pahalgam terror attack: ಕನ್ನಡಿಗರ ನೆರವಿಗೆ ಸರ್ಕಾರದಿಂದ ತಕ್ಷಣದ ಕ್ರಮ

Pahalgam terror attack: ಕನ್ನಡಿಗರ ನೆರವಿಗೆ ಸರ್ಕಾರದಿಂದ ತಕ್ಷಣದ ಕ್ರಮ

Pahalgam terror attack

Bengaluru: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡು (Pahalgam terror attack) ಹಾರಿಸಿದ ದಾಳೆಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ದುರ್ಘಟನೆಯಿಂದ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಮತ್ತು ತಕ್ಷಣದ ನೆರವಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು.

ಸಿಎಂ ಸೂಚನೆಯಂತೆ ಅಧಿಕಾರಿಗಳ ತಂಡವೊಂದು ಕಾಶ್ಮೀರಕ್ಕೆ ತೆರಳಿ, ಸಿಲುಕಿರುವ ಕನ್ನಡಿಗರಿಗೆ ಸಹಾಯ ಮಾಡುತ್ತಿದೆ. ದೆಹಲಿಯ ರೆಸಿಡೆಂಟ್ ಕಮಿಷನರ್‌ಗೆ ಮುಂದಿನ ಕಾರ್ಯಾಚರಣೆಯ ಉಸ್ತುವಾರಿ ನೀಡಲಾಗಿದೆ.

ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, “ಘಟನೆ ಬಗ್ಗೆ ನಾನು ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ನಾವು ಹಿರಿಯ ಅಧಿಕಾರಿಯನ್ನ ಕಳುಹಿಸಿದ್ದೇವೆ. 15 ಮಂದಿ ಸಿಲುಕಿರುವ ಮಾಹಿತಿ ಇದೆ. ಸಹಾಯವಾಣಿ ಆರಂಭಿಸಲು ಯೋಜನೆ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಡಿಸಿ ಗುರುದತ್ ಹೆಗಡೆ ಮಾಹಿತಿ ನೀಡಿ, ಮೃತ ಮಂಜುನಾಥ್ ಅವರ ಶವ ಬೆಟ್ಟದ ಮೇಲಿರುವುದರಿಂದ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಶವವನ್ನು ಕೆಳಗೆ ತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದರು. ಮೃತರ ಪತ್ನಿ ಪಲ್ಲವಿಯವರನ್ನು ಸಂಪರ್ಕಿಸಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ಸೂಚಿಸಿ, “ಇದು ಹೇಯ ಮತ್ತು ಅಮಾನವೀಯ ಕೃತ್ಯ. ಇಂತಹ ಭಯೋತ್ಪಾದನೆ ಖಂಡನೀಯ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು, “ಈ ಹೇಡಿತನದ ದಾಳಿಯು ಮಾನವೀಯತೆಗೆ ಕಳಂಕ. ನೊಂದವರಿಗೆ ಸಂತಾಪಗಳು. ಭಾರತದ ಭದ್ರತೆ ಎತ್ತಿನ ಪ್ರಶ್ನೆ. ಕೇಂದ್ರ ಸರ್ಕಾರ ಇದಕ್ಕೆ ಗಂಭೀರ ಕ್ರಮ ಕೈಗೊಳ್ಳಬೇಕು.”

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಾ ಸಂತಾಪ ಸೂಚಿಸಿ, “ಶಿವಮೊಗ್ಗ ಮೂಲದ ಕನ್ನಡಿಗರ ಮೃತದೇಹವನ್ನು ತಂದುಕೊಡುವ ಕಾರ್ಯ ನಡೆಯುತ್ತಿದೆ. ಉಳಿದ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತರಲು ಪೊಲೀಸ್ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ಹೋಗಿದೆ” ಎಂದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version