Brussels, Belgium: ಪಾಕಿಸ್ತಾನದ (Pakistan) ವಾಯುನೆಲೆಗಳನ್ನು ನಾಶಮಾಡಿರುವುದು ಭಾರತದ ರಫೇಲ್ ಯುದ್ಧವಿಮಾನಗಳ ಶಕ್ತಿಗೆ ಸಾಕ್ಷಿಯಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಬ್ರಸೆಲ್ಸ್ನಲ್ಲಿ ಸೋಮವಾರ ನಡೆದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದರು.
ಒಂದು ತಿಂಗಳ ಹಿಂದೆ ಭಾರತ ನಡೆಸಿದ “ಆಪರೇಶನ್ ಸಿಂಧೂರ್” ವೇಳೆ ಪಾಕ್ ಭಾರೀ ನಷ್ಟ ಅನುಭವಿಸಿದೆ. ಈ ಕುರಿತು ಮಾತನಾಡಿದ ಜೈಶಂಕರ್, ಭವಿಷ್ಯದಲ್ಲಿಯೂ ಭಾರತ ತೀವ್ರ ಕ್ರಮ ಕೈಗೊಳ್ಳುತ್ತೆ ಎಂದರು. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನರು ಬಲಿಯಾದ ನಂತರ ಭಾರತ ತೀವ್ರ ಕ್ರಮ ಕೈಗೊಂಡಿತ್ತು.
ಜೈಶಂಕರ್ ಅವರ ಹೇಳಿಕೆಯಲ್ಲಿ, ಪಾಕಿಸ್ತಾನದ ಎಂಟು ಪ್ರಮುಖ ವಾಯುನೆಲೆಗಳನ್ನು ಭಾರತೀಯ ಯುದ್ಧವಿಮಾನಗಳು ಧ್ವಂಸ ಮಾಡಿವೆ. ಇದರಿಂದಾಗಿ ಪಾಕ್ ಶಾಂತಿಗೆ ಮೊರೆಹಾಕಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ತರಬೇತಿ ನೀಡಿ ಅವರನ್ನು ಭಾರತದ ಮೇಲೆ ಕಳುಹಿಸುತ್ತಿದೆ ಎಂದು ಅವರು ಆರೋಪಿಸಿದರು.
ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ “ಸೂನ್ಯ ಸಹಿಷ್ಣುತೆ” (Zero Tolerance) ನಿಲುವು ಹೊಂದಿದೆ. ಯಾರು ದಾಳಿ ಮಾಡಿದರೂ, ಅವರು ಎಲ್ಲಿ ಇದ್ದರೂ ಪ್ರತೀಕಾರ ತೀರಿಸಲಾಗುವುದು ಎಂದು ಜೈಶಂಕರ್ ತಿಳಿಸಿದರು.
ಮೇ 7 ರಂದು ಭಾರತ ಪಾಕ್ ಆಕ್ರಮಿತ ಪ್ರದೇಶದಲ್ಲಿನ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಮೇ 10 ರಂದು ಉಭಯ ದೇಶಗಳ ಸೇನೆಗಳ ನಡುವಿನ ಮಾತುಕತೆಯ ನಂತರ ಕದನ ವಿರಾಮ ಜಾರಿಯಾಯಿತು.
ಜೈಶಂಕರ್ ಅವರು ಬೆಲ್ಜಿಯಂನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ವಿವರಿಸಿದರು ಮತ್ತು ಇದೊಂದು ಜಾಗತಿಕ ಸಮಸ್ಯೆ ಎಂದು ಒತ್ತಿಹೇಳಿದರು.