New Delhi: ಮೊದಲ ಬಾರಿಗೆ ಪಾಕಿಸ್ತಾನವು (Pakistan) ಚರ್ಚೆ ಮೂಲಕ ಭಾರತಕ್ಕೆ ಸಿಂಧೂ ಜಲ ಒಪ್ಪಂದದ (Indus Water Treaty) ಅಮಾನತೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದೆ. ಪಹಲ್ಗಾಮ್ ದಾಳಿಯ ನಂತರ ಭಾರತವು ಈ ಒಪ್ಪಂದವನ್ನು ರದ್ದು ಮಾಡಿದ ನಂತರ, ಪಾಕಿಸ್ತಾನದಲ್ಲಿ ನೀರಿನ ಕೊರತೆ ಎದುರಾಗಿದೆ.
ಭಾರತವು ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನಿಲ್ಲಿಸುವವರೆಗೂ ಒಪ್ಪಂದ ರದ್ದಾಗಿರುತ್ತದೆ ಎಂದು ಸ್ಪಷ್ಟ ಪಡಿಸಿದ್ದಾಗ ಪಾಕಿಸ್ತಾನ ಅಹಂಕಾರಪೂರ್ವಕ ಮಾತುಗಳನ್ನಾಡಿತು. ಆದರೆ ಈಗ ಮಾತುಕತೆ ಮೂಲಕ ಪಾಕಿಸ್ತಾನ ಈ ಒಪ್ಪಂದದ ಬಗ್ಗೆ ಚರ್ಚಿಸಲು ಸಿದ್ಧವಾಗಿದೆ.
ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಸರ್ಕಾರದ ಪರವಾಗಿ ಒಪ್ಪಂದ ಸ್ಥಗಿತದ ಬಗ್ಗೆ ಭಾರತದಿಂದ ಪ್ರತ್ಯುತ್ತರ ಪಡೆದಿದ್ದಾರೆ. ಪಾಕಿಸ್ತಾನ ಈ ನಿರ್ಧಾರವನ್ನು ಮರುಪರಿಶೀಲಿಸಲು ಪತ್ರ ಬರೆದಿದ್ದು, ನದಿಗಳ ಹರಿವನ್ನು ಪುನರಾರಂಭಿಸುವಂತೆ ಮನವಿ ಮಾಡಿದೆ.