back to top
24.3 C
Bengaluru
Thursday, August 14, 2025
HomeIndiaಮತ್ತೆ ಕದನ ವಿರಾಮ ಉಲ್ಲಂಘಿಸಿದ Pakistan– India ತಕ್ಷಣದ ಪ್ರತಿದಾಳಿ

ಮತ್ತೆ ಕದನ ವಿರಾಮ ಉಲ್ಲಂಘಿಸಿದ Pakistan– India ತಕ್ಷಣದ ಪ್ರತಿದಾಳಿ

- Advertisement -
- Advertisement -

Srinagar: ಭಾರತ ನಡೆಸಿದ “ಆಪರೇಷನ್ ಸಿಂಧೂರ”ಗೆ ಹೆದರಿದ ಪಾಕಿಸ್ತಾನ (Pakistan) ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದರೂ, ಅದನ್ನೇ ಉಲ್ಲಂಘಿಸಿ ಮತ್ತೊಮ್ಮೆ ಗಡಿಯಲ್ಲಿ ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಎಲ್‌ಓಸಿ (LOC)ಯ ಪೂಂಚ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ.

ಇದಕ್ಕೆ ತಕ್ಷಣವೇ ಭಾರತೀಯ ಸೇನೆ ತಿರುಗೇಟು ನೀಡಿದ್ದು, ಎರಡು ಸೇನೆಗಳ ನಡುವೆ ಸುಮಾರು 15 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಯಾವುದೇ ಸಾವು-ನೋವಿನ ವರದಿ ಇಲ್ಲ, ಆದರೆ ಎಲ್‌ಓಸಿ ಯುದ್ದೆಂದರೆ ರಕ್ಷಣಾ ವಿಭಾಗ ಹೈ ಅಲರ್ಟ್ ಘೋಷಿಸಿದೆ.

ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದೆಯೆಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಪ್ರತಿಯಾಗಿ ಭಾರತೀಯ ಸೇನೆಯು ತಕ್ಷಣವೇ ಪ್ರತಿದಾಳಿ ನಡೆಸಿದ್ದು, ಹೀಗಾಗಿ ಗುಂಡಿನ ದಾಳಿ ಈವರೆಗೆ ನಿಂತಿದೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ಮೇ 7ರಂದು ಆಪರೇಷನ್ ಸಿಂಧೂರ ಆರಂಭಿಸಿತ್ತು. ನಂತರ ಪಾಕ್ ಮನವಿಗೆ ತಲೆಬಾಗಿ ಭಾರತ ಕದನ ವಿರಾಮಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಇದೇ ಪಾಕಿಸ್ತಾನವು ಪುನಃ ನಂಬಿಕೆಗೆ ಧಕ್ಕೆಯಾಗುವಂತೆ ನಡೆದುಕೊಂಡಿದೆ.

ಮೇ 9 ಮತ್ತು ಮೇ 10ರಂದು ಕೂಡ ಪಾಕಿಸ್ತಾನವು ಉಲ್ಲಂಘನೆ ನಡೆಸಿದ್ದು, ಬಿಎಸ್‌ಎಫ್ ತಕ್ಷಣ ತಿರುಗೇಟು ನೀಡಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಿಂದೆಯೇ ಎಚ್ಚರಿಕೆ ನೀಡಿದ್ದರು – ಪಾಕ್ ಮತ್ತೆ ಕದನವಿರಾಮ ಉಲ್ಲಂಘಿಸಿದರೆ ಆಪರೇಷನ್ ಸಿಂಧೂರ ಪುನರಾರಂಭವಾಗಲಿದೆ.

ಇದೀಗ ಪಾಕಿಸ್ತಾನದ ಇತ್ತೀಚಿನ ನಡೆಗೆ ಭಾರತ ಗಂಭೀರವಾಗಿ ಪ್ರತಿಕ್ರಿಯಿಸಬಹುದು ಎಂಬ ನಿರೀಕ್ಷೆ ಇದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page